ಏಕಾಏಕಿ ಬಂದ ನೀರು: ಹಳ್ಳದ ಮಧ್ಯೆ ಸಿಲುಕಿಕೊಂಡ ಐವರು ರೈತರು
Team Udayavani, Sep 9, 2022, 12:17 PM IST
ಕೊಪ್ಪಳ: ಹಳ್ಳದಲ್ಲಿ ಏಕಾಏಕಿ ನೀರು ಬಂದ ಕಾರಣ ಐವರು ರೈತರು ಹಳ್ಳದ ನಡುವೆ ಸಿಲುಕಿಕೊಂಡ ಘಟನೆ ಹಿರೇಹಳ್ಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಮಹಾಂತೇಶ ಡೊಳ್ಳಿನ, ರಮೇಶ ಡೊಳ್ಳಿನ, ಬಸವರಾಜ ಗೊಂದಿಹೊಸಳ್ಳಿ, ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರಬರ ಸಿಲುಕಿಕೊಂಡಿದ್ದಾರೆ.
ಹಳ್ಳದ ದಡದಲ್ಲಿರುವ ಕೃಷಿ ಪಂಪು ಸೆಟ್ ತೆಗೆಡಿದಲು ಈ ರೈತರು ನೀರು ಕಡಿಮೆ ಇದ್ದ ವೇಳೆ ಹೋಗಿದ್ದಾರೆ. ಆದರೆ ಏಕಾಏಕಿ ಹಿರೇಹಳ್ಳದಿಂದ ನೀರು ಬಿಡಲಾಗಿದೆ. ಹೀಗಾಗಿ ರೈತರು ನಡುವಲ್ಲಿ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ:ಬ್ರಿಟನ್ ರಾಣಿ ಎಲಿಜಬೆತ್ II ಯುಗಾಂತ್ಯ: ದೀರ್ಘಕಾಲದ ಬಳಿಕ ಚಾರ್ಲ್ಸ್ ಮುಡಿಗೆ ರಾಜ ಕಿರೀಟ
ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು, ತಹಶಿಲ್ದಾರ್ ವಿಠ್ಠಲ್ ಭೇಟಿ ನೀಡಿದ್ದಾರೆ.