ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರ ಉದ್ಘಾಟನೆ
ಶರಣಬಸವೇಶ್ವರರು ನಾಡಿನ ಭಕ್ತರ ಮನೋಭಿಲಾಷೆ ಈಡೇರಿಸಿ ಸಮೃದ್ಧ ಮಳೆ, ಬೆಳೆ ಕರುಣಿಸಲಿ
Team Udayavani, May 4, 2022, 2:40 PM IST
ಕಾರಟಗಿ: ಪಟ್ಟಣದ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದ ಮಹಾದ್ವಾರವನ್ನು ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕಲಬುರ್ಗಿಯ ಮಹಾ ದಾಸೋಹಿ, ಜ್ಞಾನಿ, ಕಾಯಕಯೋಗಿ ಶ್ರೀ ಶರಣಬಸವೇಶ್ವರರು 18ನೇ ಶತಮಾನದ ಸಂತರು ತಮ್ಮ ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಪ್ರೇರಣೆಯಾದಂತೆ ವಾಣಿಜ್ಯ ನಗರಿ ಕಾರಟಗಿ ಪಟ್ಟಣಕ್ಕೂ ಪ್ರೇರಣೆಯಾಗಿದ್ದಾರೆ. ಹಲವು ದಶಕಗಳ ಹಿಂದೆ ಪಟ್ಟಣದಲ್ಲಿ ದೇವಸ್ಥಾನ ನಿರ್ಮಾಣವಾಗಿ ನಿತ್ಯ ಪೂಜೆ, ಪ್ರತಿ ವರ್ಷ ಜಾತ್ರೆ, ಅನ್ನದಾಸೋಹ ನಡೆಸಿಕೊಂಡು ಬರಲಾಗಿದೆ. ಇಂದು ಆ ದೇವಸ್ಥಾನದ ಸುಂದರವಾದ ಮಹಾದ್ವಾರ (ಸ್ವಾಗತ ಕಮಾನ)ವನ್ನು ದೇವಸ್ಥಾನ ಟ್ರಸ್ಟ್ ಕಮಿಟಿಯವರು ದಾನಿಗಳ ನೆರವಿನಿಂದ ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಸಂತಸದ ವಿಷಯ. ಶ್ರೀ ಶರಣಬಸವೇಶ್ವರರು ಈ ನಾಡಿನ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸಿ ಸಮೃದ್ಧ ಮಳೆ, ಬೆಳೆಯನ್ನು ಕರುಣಿಸಲಿ ಎಂದರು.
ದೇವಸ್ಥಾನ ಸಮಿತಿಯಿಂದ ಶಾಸಕ ಬಸವರಾಜ ಧಡೇಸುಗೂರ, ಮಾಜಿ ಸಚಿವ ಶಿವರಾಜ ತಂಗಡಗಿ, ಬಿಜೆಪಿ ಮುಖಂಡ ತಿಮ್ಮಾರೆಡ್ಡಿ ಗಿಲ್ಲೇಸೂಗೂರು, ಪುರಸಭೆ ಸದಸ್ಯೆ ಸೌಮ್ಯ ಮಹೇಶ್ ಕಂದಗಲ್ ದಂಪತಿ, ಪ್ರಮುಖರಾದ ಗುಂಡಪ್ಪ ಕುಳಗಿ, ಬೂದಿ ಗಿರಿಯಪ್ಪ, ಉದ್ಯಮಿ ವೀರೇಶಪ್ಪ ಚಿನಿವಾಲ್, ಶಿವರೆಡ್ಡಿ ನಾಯಕ್, ವೀರೇಶ ಸಾಲೋಣಿ, ಹಾಗೂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಸೋಮಶೇಖರ ಬೇರಿಗೆ, ರಾಜಶೇಖರ ಸಿರಿಗೇರಿ, ಅರ್ಚಕ ಮುತ್ತಯ್ಯ ಸ್ವಾಮಿ, ಪ್ರಮುಖರಾದ ಜಗದೀಶ ಅವರಾದಿ, ಕಿರಾಣಿ ವರ್ತಕರ ಸಂಘದ ಮಲ್ಲಿಕಾರ್ಜುನ ಕೊಟಗಿ, ಖಾಜಾ ಹುಸೇನ್ ಮುಲ್ಲಾ, ಅಮರೇಶಪ್ಪ ಸಾಲಗುಂದಾ, ಶರಣಪ್ಪ ಗದ್ದಿ, ಶರಣಪ್ಪ ದಿವಟರ್, ಬಾಬುಸಾಬ್ ಬಳಿಗಾರ್, ಬಸನಗೌಡ ಕಾಯಿ ಅಂಗಡಿ, ಕಲ್ಯಾಣಪ್ಪ ರೌಡಕುಂದಿ, ಪಾಲಾಕ್ಷಪ್ಪ ಕೆಂಡದ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !