ಮೈತ್ರಿಗೆ ವರ್ಷ: ಜಿಲ್ಲೆಗಿಲ್ಲ ಹರ್ಷ
•ನೀರಾವರಿಗೆ ಕೊಟ್ಟ ಹಣ ಮಧ್ಯಂತರ•ತುಂಗಭದ್ರೆ ಇದ್ದರೂ ನೀರಿಲ್ಲದೆ ಭಣಭಣ
Team Udayavani, Jul 1, 2019, 10:30 AM IST
ಕೊಪ್ಪಳ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ ವರ್ಷ ಪೂರೈಸಿದೆ. ಆದರೆ ಕೊಪ್ಪಳ ಜಿಲ್ಲೆಗೆ ಹೇಳಿಕೊಳ್ಳುವಂತಹ ಯೋಜನೆಗಳೇ ಜಾರಿಯಾಗಿಲ್ಲ. ಆಟಿಕೆ ಸಾಮಗ್ರಿ ಘಟಕದ ನೆಪ ತೋರಿಸಿ, ಇಸ್ರೇಲ್ ಮಾದರಿಯ ಕೃಷಿ ಕನಸು ಬಿತ್ತಿದ್ದರೂ ಅದರ ಸುದ್ದಿನೇ ಇಲ್ಲ. ಇನ್ನೂ ಸರ್ಕಾರದ ಮುಂದಿರುವ ನೀರಾವರಿ ಯೋಜನೆ, ಸಮಾನಾಂತರ ಜಲಾಶಯದ ಪ್ರಸ್ತಾವನೆಗೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ.
ಹೌದು. ಕೊಪ್ಪಳ ಜಿಲ್ಲೆ ಮೊದಲೇ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೈಕ ಭಾಗಕ್ಕೆ ಕೋಟಿ ಕೋಟಿ ಅನುದಾನ ಕೊಡುತ್ತಿದೆ ಎನ್ನುವ ಮಾತು ಲೆಕ್ಕಪತ್ರಕ್ಕೆ ಸೀಮಿತವಾಗಿದೆ ಎನ್ನುವ ಆಪಾದನೆ ಮಧ್ಯದಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ ಎನ್ನುವ ಸರ್ಕಾರದ ಮಾತುಗಳು ಕಾರ್ಯರೂಪಕ್ಕೆ ಬರುತ್ತಿಲ್ಲ.
ಅದರಲ್ಲೂ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜಿಲ್ಲೆಯಲ್ಲಿ ಮಹತ್ವದ ಯೋಜನೆಗಳೇ ಘೋಷಣೆಯಾಗಿಲ್ಲ. ನೀರಾವರಿ ಯೋಜನೆಗಳಿಗೆ ಮಹತ್ವವನ್ನೆ ಕೊಡುತ್ತಿಲ್ಲ. ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮೊದಲ ಬಜೆಟ್ನಲ್ಲಿ ಜಿಲ್ಲೆಗೆ ಆಟಿಕೆ ಸಾಮಗ್ರಿ ಘಟಕದ ಕ್ಲಸ್ಟರ್ ಮಾಡುವ ಮಾತನ್ನಾಡಿದ್ದರು. ಆದರೆ ವರ್ಷ ಕಳೆದರೂ ಅದರ ಪ್ರಸ್ತಾಪವೇ ಇಲ್ಲ. ಜಿಲ್ಲೆಯಲ್ಲಿ ಏಲ್ಲಿಯೂ ಅದನ್ನು ಆರಂಭಿಸಿಲ್ಲ. ಇನ್ನೂ 2ನೇ ಬಜೆಟ್ ಅವಧಿಯಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಆ ಹಣ ಇನ್ನೂ ತಾಂತ್ರಿಕ ವಿಭಾಗದಲ್ಲೇ ಹೊರಳಾಡುತ್ತಿದೆ. ಸಾವಿರಾರು ಕೋಟಿ ಯೋಜನೆಗೆ 200 ಕೋಟಿ ರೂ. ಕೊಟ್ಟು ಯೋಜನೆ ಜೀವಂತ ಇಟ್ಟಿದ್ದು ಬಿಟ್ಟರೆ ಜಿಲ್ಲೆಗೆ ಮತ್ತ್ಯಾವ ಭರವಸೆಗಳು ಸಿಕ್ಕಿಲ್ಲ. ಕೃಷ್ಣಾ ಬಿ ಸ್ಕಿಂ ಜಾರಿಗಾಗಿ ಜಿಲ್ಲೆಯಲ್ಲಿ ಹಗಲಿರುಳು ಹೋರಾಟ ನಡೆದಿದೆ.
ನೀರಾವರಿ ಬಗ್ಗೆ ರಾಜಕಾರಣಿಗಳಿಗೆ ಆಸಕ್ತಿ ಕಡಿಮೆಯಾಗಿದೆ. ಚುನಾವಣೆ ಬಂದಾಗ ಮಾತ್ರ ನೀರಾವರಿ ಮಾತನ್ನೆತ್ತುತ್ತಾರೆ. ಇನ್ನೂ ತುಂಗಭದ್ರೆ ಜಿಲ್ಲೆಯಲ್ಲೇ ಹರಿದರೂ ನಮಗೆ ಕುಡಿಯಲು ನೀರಿಲ್ಲ. ಪ್ರತಿ ವರ್ಷ 320ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. 2008-09ರಲ್ಲಿ ಮಾಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೇ ಆಮೆಗತಿಯಲ್ಲಿ ಸಾಗಿದೆ. ನೀರಿನ ಸಮಸ್ಯೆ ಗಂಭೀರವಾಗಿದೆ. ಹೈಕ ಮಂಡಳಿಯಿಂದ ಜಿಲ್ಲೆಗೆ ಬರುವ ಅನುದಾನದಲ್ಲೇ ಕೆಲವೊಂದು ಕಾಮಗಾರಿ ನಡೆದಿದ್ದು ಬಿಟ್ಟರೆ ಮತ್ತೆ ಹೇಳಿಕೊಳ್ಳುವಂತ ಮಹತ್ವದ ಯೋಜನೆಗಳಿಲ್ಲ. ಜಿಲ್ಲೆಯಲ್ಲಿ ಇಂಜನಿಯರಿಂಗ್ ಕಾಲೇಜು ಮಾತ್ರ ವೇಗದ ಗತಿಯಲ್ಲಿ ಕಾಮಗಾರಿ ನಡೆಸಿದೆ. ಉಳಿದ ಯಾವುದೇ ಯೋಜನೆ ಪ್ರಗತಿಯಲ್ಲಿ ವೇಗವನ್ನೇ ಕಳೆದುಕೊಂಡಿವೆ.
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…