ಹೇ ವಿಧಿಯೇ.. ಸಾಯುವ ಮುನ್ನ ಸ್ನೇಹಿತರಿಂದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿಸಿಕೊಂಡ ಬಾಲಕ
ಕಣ್ಣು ಮುಚ್ಚುವ ಮುನ್ನ ಶಾಲೆ, ಸ್ನೇಹಿತರನ್ನು ನೋಡಿ ಉಸಿರು ಚೆಲ್ಲಿದ..
Team Udayavani, Jul 31, 2022, 7:35 PM IST
ಕೊಪ್ಪಳ: ಸಾಯುವ ಮುನ್ನಾ ದಿನ ತನ್ನ ಸಹಪಾಠಿಗಳ ಜೊತೆ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿಸಿಕೊಂಡಿದ್ದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕನು ಭಾನುವಾರ ಇಹಲೋಕ ತ್ಯಜಿಸಿದ ಕರುಣಾಜನಕ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನ್ನು ಸುಹಾಸ್ ಎಂದು ತಿಳಿದು ಬಂದಿದೆ. ಕಾರಟಗಿಯ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಈತನು ಓದಿನಲ್ಲೂ ತುಂಬ ಜಾಣನಿದ್ದ. ತರಗತಿಯಲ್ಲಿ ಎಲ್ಲರಿಗಿಂತಲೂ ಟಾಪರ್ ಆಗಿದ್ದನು. ಆದರೆ ಕೆಲವು ತಿಂಗಳಿಂದ ಈತನಿಗೆ ಕಿಡ್ನಿ ಸಮಸ್ಯೆ ತುಂಬಾ ಕಾಡಿತ್ತು. ಇದರಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಸುಹಾಸ್ ಹಾಸಿಗೆಯನ್ನಡಿದಿದ್ದನು.
ಇದನ್ನೂ ಓದಿ: ಜಿಲ್ಲಾಡಳಿತದಿಂದ ದಕ್ಷಿಣ ಕನ್ನಡದಲ್ಲಿ ಇನ್ನೂ 2 ದಿನ ನಿರ್ಬಂಧ ವಿಸ್ತರಣೆ
ಶನಿವಾರವಷ್ಟೇ ತನ್ನ ಶಾಲೆ, ಶಿಕ್ಷಕರನ್ನು ನೋಡಬೇಕು. ಸ್ನೇಹಿತರನ್ನು ಕಾಣಬೇಕು ಎಂದು ಪಾಲಕರಿಗೆ ಇಚ್ಛೆ ವ್ಯಕ್ತಪಡಿಸಿದ್ದ. ಮಗನ ಇಚ್ಚೆಯಂತೆ ಆತನ ಹೆತ್ತವರು ಮಗನು ಓದಿದ ಶಾಲೆಗೆ ಕಾರಿನಲ್ಲಿ ಕರೆ ತಂದಿದ್ದರು. ಶಾಲೆಯ ಆತನ ಸ್ನೇಹಿತರು ಸುಹಾಸನ ಸ್ಥಿತಿ ನೋಡಿ ಕಣ್ಣೀರಿಟ್ಟಿದ್ದರು. ಅಲ್ಲದೇ, ಸ್ನೇಹದ ಸಂಕೇತವಾದ ಫ್ರೆಂಡ್ ಶಿಪ್ ಬೆಲ್ಟ್ನ್ನು ಕಣ್ಣೀರಿಡುತ್ತಲೇ ಕಟ್ಟಿ ನಮ್ಮ ಸ್ನೇಹ ಸಂಬಂಧ ಗಟ್ಟಿಯಾಗಿರಲಿ ಎಂದು ಹಾರೈಸಿದ್ದರು. ಆತನೂ ಅರೆಪ್ರಜ್ಞಾ ಸ್ಥಿತಿಯ ಮಧ್ಯೆ ಸ್ನೇಹಿತರೊಂದಿಗೆ ಪ್ರೆಂಡ್ಶಿಪ್ ಬೆಲ್ಟ್ ಕಟ್ಟಿಸಿಕೊಂಡಿದ್ದನು. ಆದರೆ ವಿಧಿ ಬರಹವೆಂಬಂತೆ ಭಾನುವಾರ ಆತನು ಇಹಲೋಕ ತ್ಯಜಿಸಿದ್ದಾನೆ. ಆತನ ಸ್ನೇಹಿತರು ಸ್ನೇಹದ ಬೆಲ್ಟ್ ಕಟ್ಟುವ ಮೂಲಕ ಕೊನೆಯ ವಿದಾಯ ಹೇಳಿ ಕಣ್ಣೀರಿಟ್ಟಿದ್ದಾರೆ.
ಆ ದೇವರಿಗೆ ಕರುಣೆಯೇ ಇಲ್ಲವೇನೋ ಎಂದೆನಿಸಿತು. ಜಗತ್ತಿನಲ್ಲಿ ಬಾಳಿ ಬೆಳಗಬೇಕಾದ ಪುಟಾಣಿ ಕಂದಮ್ಮ ಈ ಜಗವನ್ನೇ ಬಿಟ್ಟು ಹೋಗಿದ್ದಾನೆ. ಪಾಲಕರು ಆತನ ಇಚ್ಛೆಯಂತೆ ಶಾಲೆಯ ಶಿಕ್ಷಕರನ್ನು, ಸ್ನೇಹಿತರನ್ನು ಭೇಟಿ ಮಾಡಿಸಿದ್ದಾರೆ. ಶಿಕ್ಷಕರು, ಸ್ನೇಹಿತರು ಕಣ್ಣೀರಿಡುತ್ತಲೇ ಆತನ ಸ್ಥಿತಿ ನೋಡಿ ಮರುಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ