Gangavathi: ಡಾ.ವಿಷ್ಣುವರ್ಧನ್ ವೃತ್ತದ ನಾಮಫಲಕ ಅನಾವರಣ
ಡಾ.ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆಗೆ ಶೀಘ್ರ ಸಭೆ
Team Udayavani, Sep 18, 2023, 3:02 PM IST
ಗಂಗಾವತಿ: ನಗರದ ಶಿವೆ ಟಾಕೀಸ್ ಬಳಿಯಿರುವ ಡಾ.ವಿಷ್ಣುವರ್ಧನ್ ವೃತ್ತದಲ್ಲಿ ಅವರ ಪುತ್ಥಳಿ ಸ್ಥಾಪನೆ ಮಾಡಲು ಶೀಘ್ರ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳ ಸಭೆ ಕರೆದು ನಿರ್ಣಯ ಮಾಡಲಾಗುತ್ತದೆ ಎಂದು ಡಾ.ವಿಷ್ಣುವರ್ಧನ್ ಅಭಿಮಾನಿ ಹಾಗೂ ಬಿಜೆಪಿ ಮುಖಂಡ ವಡ್ರಟ್ಟಿ ವೀರಭದ್ರಪ್ಪ ನಾಯಕ ಹೇಳಿದರು.
ಅವರು ನಗರದ ಶಿವೆ ಟಾಕೀಸ್ ಹತ್ತಿರ ಇರುವ ವೃತ್ತಕ್ಕೆ ವಿಷ್ಣುವರ್ಧನ್ ಜಯಂತಿ ನಿಮಿತ್ತ ಡಾ.ವಿಷ್ಣುವರ್ಧನ್ ವೃತ್ತ ಎಂದು ನಾಮಕರಣ ಮಾಡಿದ ನಾಮಫಲಕದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಡಾ.ವಿಷ್ಣುವರ್ಧನ್ ಅವರು ಕನ್ನಡದ ಮೇರು ನಟರಾಗಿದ್ದರು. ಅವರು 200ಕ್ಕೂ ಹೆಚ್ಚು ಕನ್ನಡ ಸಿನೆಮಾಗಳು ಸೇರಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದು ಅದ್ಭುತ ನಟರಾಗಿದ್ದರು. ಅವರಿಗೆ ಕೆಲವರು ಕಿರುಕುಳ ನೀಡಿದರೂ ಸಹಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಯಾವುದೇ ಗಲಾಟೆ ಮಾಡದಂತೆ ತಾಕೀತು ಮಾಡಿದ ಮಹಾನ್ ನಾಯಕ. ಅವರ ವೃತ್ತವನ್ನು ಮಾಡುವ ಮೂಲಕ ನಗರಸಭೆ ಹಾಗೂ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ಚುರುಕಾಗಲಿ ಎಂದರು.
ರಮೇಶ ನೇತ್ರಾ, ನೀಲಕಂಠಪ್ಪ, ಎಸ್.ಎಸ್.ಪಾಷಾ, ಕೆ.ನಿಂಗಜ್ಜ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಬೆ ಸದಸ್ಯ ಮೌಲಸಾಬ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಮಹಾಬಲೇಶ್ವರ, ರಂಗಪ್ಪ ನಾಯಕ, ನಾಗರಾಜ ಮೇದಾರ, ಎಸ್.ಎಸ್.ಪಾಷಾ, ಶರೀಫ, ಮಹಮದ್, ಶಿವಪ್ಪ ನವಣೆಕ್ಕಿ, ಮಲ್ಲಿಕಾರ್ಜುನ ಗೋಟೂರು, ಹನುಮಂತಪ್ಪ ಇಂದ್ರಾನಗರ, ಎಂ.ಶರಣಪ್ಪ, ಕಲಾವಿದ ಅಮರೇಶಪ್ಪ ಇಂಗಳಗಿ, ಪಂಪಾಪತಿ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
MUST WATCH
ಹೊಸ ಸೇರ್ಪಡೆ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ