25ರಿಂದ ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು
Team Udayavani, Jul 22, 2020, 9:18 AM IST
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಜು.25ರಿಂದ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಿರ್ಧರಿಸಿದ್ದಾರೆ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧಿಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ತುಂಗಭದ್ರಾ ಡ್ಯಾಂನಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ಜು.25ರಿಂದ ನ.30ರ ವರೆಗೂ 700 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು.25ರಿಂದ ನ.30ರ ವರೆಗೂ 1280 ಕ್ಯೂಸೆಕ್ ನೀರು, ರಾಯ-ಬಸವಣ್ಣ ಕಾಲುವೆಗೆ ಜೂ.1ರಿಂದ ಡಿ.10ರ ವರೆಗೂ 250 ಕ್ಯೂಸೆಕ್ ನೀರು, ನದಿಗೆ ಪೂರಕವಾಗಿ ಜು.25ರಿಂದ ನ.30ರ ವರೆಗೂ 60 ಕ್ಯೂಸೆಕ್ ನೀರು ಹರಿಸಲಾಗುವುದು. ಇನ್ನೂ ಎಡದಂಡೆ ಮುಖ್ಯ ಕಾಲುವೆ ಮತ್ತು ಮೇಲ್ಮಟ್ಟದ ಕಾಲುವೆಗೆ ಜು.25 ರಿಂದ ನ.30ರ ವರೆಗೂ 4100 ಕ್ಯೂಸೆಕ್ನಂತೆ ನೀರು, ಕಾರ್ಖಾನೆಗಳಿಗೆ ಜು.25ರಿಂದ ನ.30ರ ವರೆಗೂ 60 ಕ್ಯೂಸೆಕ್, ಏತ ನೀರಾವರಿ ಯೋಜನೆಗಳಿಗೆ ಜು.25 ರಿಂದ ನ.30ರ ವರೆಗೂ 100 ಕ್ಯೂಸೆಕ್ ನಂತೆ ನೀರು ಹರಿಸಲು ನಿರ್ಧರಿಸಲಾಗಿದೆ. ಆನ್ ಆ್ಯಂಡ್ ಆಫ್ ಪದ್ಧತಿ ಅಳವಡಿಕೆ: ತುಂಗಭದ್ರಾ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ಒದಗಿಸಲು ಕಳೆದ ವರ್ಷದಂತೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆನ್ ಆ್ಯಂಡ್ ಆಫ್ ಪದ್ಧತಿ ಅನುಸಾರ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.
ಆನ್ ಆ್ಯಂಡ್ ಆಫ್ ಪದ್ಧತಿಯಂತೆ, ವಿತರಣಾ ಕಾಲುವೆ ಸಂಖ್ಯೆ 1 ರಿಂದ 16, 49,51,52,55,56 ಕಾಲುವೆಗೆ ಸೆ.1ರ ಬೆಳಗ್ಗೆ 8ರಿಂದ ಸೆ.4ರ ಬೆಳಗ್ಗೆ 8ರ ವರೆಗೂ, ಅ.01ರ ಬೆಳಗ್ಗೆ 8 ರಿಂದ ಅ.4ರ ಬೆಳಗ್ಗೆ 8 ಗಂಟೆ, ನ.1ರ ಬೆಳಗ್ಗೆ 8 ರಿಂದ ನ.4ರ ಬೆಳಗ್ಗೆ 8 ಗಂಟೆವರೆಗೂ, ಡಿ.1ರ ಬೆಳಗ್ಗೆ 8 ರಿಂದ ಡಿ.4ರ ಬೆಳಗ್ಗೆ 8ರ ವರೆಗೂ ಈ ವಿತರಣಾ ಕಾಲುವೆಗೆ ನೀರು ಹರಿಸುವುದು ಭಾಗಶಃ ಬಂದ್ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 17ರಿಂದ 25, 36,37, 38, 40, 41, 42, 44, 45, 46, 48 ಕಾಲುವೆಗೆ ಸೆ.4ರ ಬೆಳಗ್ಗೆ 8 ರಿಂದ ಸೆ.7ರ ಬೆಳಗ್ಗೆ 8ರ ವರೆಗೂ, ಅ.4ರ ಬೆಳಗ್ಗೆ 8 ರಿಂದ ಅ.7ರ ಬೆಳಗ್ಗೆ 8ರ ವರೆಗೂ, ನ.4ರ ಬೆಳಗ್ಗೆ 8 ರಿಂದ ನ.7ರ ಬೆಳಗ್ಗೆ 8ರ ವರೆಗೂ, ಡಿ.4ರ ಬೆಳಗ್ಗೆ 8 ರಿಂದ ಡಿ.7ರ ಬೆಳಗ್ಗೆ 8ರ ವರೆಗೂ ನೀರು ಈ ಕಾಲುವೆಗಳಿಗೆ ನೀರು ಹರಿಸುವುದು ಬಂದ್ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 27 ರಿಂದ 34, 62,63, 65, 66, 69, 71/ಎ, 73, 74, 78, 79, 81, 82, 84ನೇ ಕಾಲುವೆಗಳಿಗೆ ಸೆ.7ರ ಬೆಳಗ್ಗೆ 8 ರಿಂದ ಸೆ.10ರ ಬೆಳಗ್ಗೆ 8 ಗಂಟೆವರೆಗೂ, ಅ.7ರ ಬೆಳಗ್ಗೆ 8 ರಿಂದ ಅ.10ರ ಬೆಳಗ್ಗೆ 8ರ ವರೆಗೂ, ನ.7ರ ಬೆಳಗ್ಗೆ 8ರಿಂದ ನ.10ರ ಬೆಳಗ್ಗೆ 8ರ ವರೆಗೂ, ಡಿ.7ರ ಬೆಳಗ್ಗೆ 8 ರಿಂದ ಡಿ.10ರ ಬೆಳಗ್ಗೆ 8ರ ವರೆಗೂ ನೀರು ಹರಿಸುವುದು ಸ್ಥಗಿತ ಮಾಡಲಾಗುವುದು.
ಇನ್ನೂ ವಿತರಣಾ ಕಾಲುವೆ 76, 85,87, 89, 90,91,92ರ ವರೆಗೂ ಸೆ.10ರ ಬೆಳಗ್ಗೆ 8 ರಿಂದ ಸೆ.13ರ ಬೆಳಗ್ಗೆ 8ರ ವರೆಗೂ, ಅ.10ರ ಬೆಳಗ್ಗೆ 8 ರಿಂದ ಅ.13ರ ಬೆಳಗ್ಗೆ 8ರ ವರೆಗೂ, ನ.10ರ ಬೆಳಗ್ಗೆ 8 ರಿಂದ ನ.13ರ ಬೆಳಗ್ಗೆ 8ರ ವರೆಗೂ, ಡಿ.10ರ ಬೆಳಗ್ಗೆ 8 ರಿಂದ ಡಿ.13ರ ಬೆಳಗ್ಗೆ 8ರ ವರೆಗೂ ಕಾಲುವೆಗೆ ನೀರು ಹರಿಸುವುದು ಸ್ಥಗಿತ ಮಾಡಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ನಿರ್ಧರಿಸಿದ್ದಾರೆಂದು ನೀರಾವರಿ ಅಭಿಯಂತರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ