ಪಶು ಆಸ್ಪತ್ರೆಯಲ್ಲಿ ಸೌಕರ್ಯ ಕಣ್ಮರೆ!

ಪಶುಗಳ ಕಾಳಜಿಗಾಗಿಶಾಶ್ವತ ಸಿಬ್ಬಂದಿಯೇ ಇಲ್ಲ ಜಾನುವಾರುಗಳಿಗೆ ಪೂರೈಸಲು ನೀರಿಲ್ಲ

Team Udayavani, Aug 2, 2019, 12:52 PM IST

2-Agust-22

ಕುರುಗೋಡಿನ ಪಶು ಆಸ್ಪತ್ರೆ.

ಕುರುಗೋಡು: ಹೆಸರಿಗಷ್ಟೇ ತಾಲೂಕು ಕೇಂದ್ರವಾದಂತಾಗಿದ್ದು ಅಭಿವೃದ್ಧಿ ಮಾತು ಮರೀಚಿಕೆಯಾಗಿದೆ. ಇಂಥದ್ದೊಂದು ಸಾಲಿಗೆ ತಾಲೂಕಿನ ಪಶು ಆಸ್ಪತ್ರೆಗಳು ಸೇರಿವೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 1 ಪಶು ಆಸ್ಪತ್ರೆ ಸೇವೆ ನೀಡುತ್ತಿದೆ. ಗ್ರಾಮೀಣ ಭಾಗಗಳ ಜಾನುವಾರುಗಳಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ತಲಾ ಒಂದೊಂದು ಪಶು ಚಿಕಿತ್ಸಾಲಯಗಳನ್ನು ತೆರೆಯಲಾಗಿದೆ. ಆದರೆ ಹೀಗೆ ತೆರೆಯಲಾದ ಚಿಕಿತ್ಸಾಲಯಗಳಿಗೆ ಪಶು ವೈದ್ಯಕೀಯ ಇಲಾಖೆ ಮೂಲಸೌಕರ್ಯದ ಜತೆಗೆ ಶಾಶ್ವತ ಸಿಬ್ಬಂದಿ ನಿಯೋಜನೆ ಮಾಡುವುದನ್ನೇ ಮರೆತಂತಿದ್ದು ಪಶುಗಳ ಕಾಳಜಿಯಿಂದ ದೂರವುಳಿದಿದೆ.

ಕುರುಗೋಡು ತಾಲೂಕಿನ ಸುಂಕ್ಲಮ್ಮ ದೇವಿಯ ಮುಂಭಾಗದಲ್ಲಿ 2010-11ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯ ನಿರ್ಮಾಣಗೊಂಡಿದೆ. ಆದರೆ ಅದಕ್ಕೆ ಅವಶ್ಯವಿರುವ ಮೂಲಸೌಕರ್ಯಗಳನ್ನು ನೀಡಲಾಗಿಲ್ಲ. ಆಸ್ಪತ್ರೆಯಲ್ಲಿ ಪಶುಗಳ ಕಾಳಜಿಗಾಗಿ ಶಾಶ್ವತ ಸಿಬ್ಬಂದಿಗಳೇ ಇಲ್ಲವಾಗಿದೆ.

ಮೂಲಸೌಕರ್ಯ ಕಾಣದ ಪಶು ಆಸ್ಪತ್ರೆ: ತಾಲೂಕು ಕೇಂದ್ರದಲ್ಲಿರುವ ಪಶು ಆಸ್ಪತ್ರೆಗೆ ದಿನನಿತ್ಯ 4ರಿಂದ 5 ಶ್ವಾನಗಳು, 8ರಿಂದ 15 ಎತ್ತು, ದನ, ಎಮ್ಮೆ, ಆಕಳುಗಳು ಚಿಕಿತ್ಸೆಗಾಗಿ ಬರುತ್ತಲಿವೆ. ಹೀಗೆ ಚಿಕಿತ್ಸೆಗೆ ಬರುವ ಜಾನುವಾರುಗಳಿಗೆ ಪೂರೈಸಲು ಸೂಕ್ತ ನೀರಿನ ಸೌಕರ್ಯವಿಲ್ಲ. 4 ದಿನಕ್ಕೊಮ್ಮೆ ಬಿಡುವ ಪುರಸಭೆ ನಲ್ಲಿಯ ನೀರಿಗಾಗಿ ಜಾನುವಾರುಗಳು ಕಾದುಕೂರುವಂತಾಗಿದೆ. ಬೋರ್‌ವೆಲ್ ಕೊರೆಸಿ ನೀರಿನ ಸಮರ್ಪಕ ಪೂರೈಕೆಗಾಗಿ ಆಸ್ಪತ್ರೆ ವತಿಯಿಂದ ಪುರಸಭೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆ ಆವರಣದಲ್ಲಿರುವ ಕೇವಲ ಒಂದೇ ಒಂದು ನೀರಿನ ತೊಟ್ಟಿಯಿಂದಲೇ ಸದ್ಯ ಜಾನುವಾರುಗಳ ನೀರಿನ ದಾಹ ನೀಗಿಸುವಂತಾಗಿದೆ. ಜಾನುವಾರುಗಳ ಕೃತಕ ಗರ್ಭಧಾರಣೆಗಾಗಿ ಪ್ರತ್ಯೇಕವಾದ ಶೆಡ್‌ ವ್ಯವಸ್ಥೆ ಆಸ್ಪತ್ರೆಯಲ್ಲಿರಬೇಕು. ಆದರೆ ಈ ವ್ಯವಸ್ಥೆಯೇ ಇಲ್ಲವಾಗಿದ್ದು, ಬಹುತೇಕರು ಪಶು ವೈದ್ಯಾಧಿಕಾರಿಗಳನ್ನು ದೂರವಾಣಿ ಕರೆ ಮಾಡಿ ಮನೆಗಳಿಗೆ ಕರೆಸಿಕೊಂಡು ಜಾನುವಾರುಗಳ ಗರ್ಭಧಾರಣೆ ಮಾಡಿಸಿಕೊಳ್ಳುವಂತಾಗಿದೆ.

ಕುರುಗೋಡು ಪಶು ಆಸ್ಪತ್ರೆಯಲ್ಲಿ ಒಬ್ಬರು ಮುಖ್ಯ ಪಶು ವೈದ್ಯಾಕಾರಿ ಇದ್ದರೂ ಅವರು ಕುರುಗೋಡಲ್ಲಿ ಮೂರು ದಿನ ಕಾರ್ಯನಿರ್ವಹಿಸಿ ಇನ್ನುಳಿದ ದಿನಗಳಲ್ಲಿ ಕುಡುತಿನಿ, ಸಿದ್ದಮ್ಮನಹಳ್ಳಿ, ಸುಗ್ಗೆನಹಳ್ಳಿ, ಕಂಪ್ಲಿಯಲ್ಲಿ ಡೆಪ್ಯೂಟೇಶನ್‌ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಒಬ್ಬ ಡಿ ಗ್ರೂಪ್‌ ನೌಕರ ಮತ್ತು ಜಾನುವಾರುಗಳ ಅಧಿಕಾರಿ ಮಾತ್ರವಿದ್ದು ಆಸ್ಪತ್ರೆಯಲ್ಲಿ ಹುಡುಕಿದರೂ ಶಾಶ್ವತ ಸಿಬ್ಬಂದಿಯಿಲ್ಲ. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಶಾಶ್ವತ ಸಿಬ್ಬಂದಿ (ಹಿರಿಯ ಪಶು ವೈದ್ಯಕೀಯ ಪರೀಕ್ಷಕ-01, ಪಶು ವೈದ್ಯ ಸಹಾಯಕ-01, ಡಿ ಗ್ರೂಪ್‌-01) ಇದ್ದರೂ ಒಬ್ಬರೂ ಕಾಣ ಸಿಗುವುದಿಲ್ಲ. ಸದ್ಯ ಕುರುಗೋಡು ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರೇ ಈ ಎಲ್ಲ ಗ್ರಾಮಗಳ ಪಶು ಚಿಕಿತ್ಸಾಲಯಗಳನ್ನು ನಿಭಾಯಿಸಬೇಕಿದೆ. ಅಲ್ಲದೇ ವಾರದಲ್ಲಿ ಮೂರು ದಿನಗಳಂತೆ ಕುರುಗೋಡು ಹಾಗೂ ಕಂಪ್ಲಿ ಎರಡೂ ತಾಲೂಕು ಭಾಗಗಳಲ್ಲಿನ ಚಿಕಿತ್ಸಾಲಯಗಳ ನಿರ್ವಹಣೆ ಹೊರೆ ಹೊತ್ತಿದ್ದಾರೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.