ಬಂಡೆಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
Team Udayavani, Apr 19, 2021, 4:10 PM IST
ಮದ್ದೂರು: ತಾಲೂಕಿನ ಚಾಮನಹಳ್ಳಿಗ್ರಾಮದ ಶ್ರೀ ಬಂಡೆಶನೇಶ್ವರಸ್ವಾಮಿಜಾತ್ರಾ ಮಹೋತ್ಸವ ಭಾನುವಾರವಿಜೃಂಭಣೆಯಿಂದ ನೆರವೇರಿತು.
ಶನಿವಾರ ಬೆಳಗ್ಗೆ 7.30ಕ್ಕೆ ಆರಂಭವಾದಪೂಜಾ ವಿಧಿ ವಿಧಾನದಲ್ಲಿ ಮಹಾಗಣಪತಿಹೋಮ, ರಾಮತಾರಕ ಹೋಮ,ರುದ್ರಹೋಮ, ಶ್ರೀ ಶನೇಶ್ವರಸ್ವಾಮಿಮೂಲ ಮಂತ್ರ ಸೇರಿದಂತೆ ಇನ್ನಿತರೆಪೂಜಾ ಕೈಂಕರ್ಯ ನೆರವೇರಿದವು.ಸಂಜೆ 7 ಗಂಟೆಗೆ ದೇವಾಲಯದಆವರಣದಲ್ಲಿ ಛಾಯಾ ದೇವಿಅಮ್ಮನವರ ಪೂಜಾ ಕುಣಿತಅಮ್ಮನವರಿಗೆ ಮಡಿಲಕ್ಕಿ ತುಂಬುವಜತೆಗೆ ಅಭಿಷೇಕ, ಅಲಂಕಾರ,ಮಹಾಮಂಗಳಾರತಿ ಸೇರಿದಂತೆ ಹಲವುಪೂಜಾ ವಿಧಿ ವಿಧಾನಗಳು ಸರಾಗವಾಗಿನೆರವೇರಿದವು.
ಭಾನುವಾರ ಬೆಳಗ್ಗೆ 4ಕ್ಕೆ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ಉತ್ಸವ, ಬಂಡೆಶನೇಶ್ವರ ಸ್ವಾಮಿ ಬಸವಪ್ಪ ಉತ್ಸವವುಹೂ-ಹೊಂಬಾಳೆ ಸಹಿತ ಜರುಗಿತಲ್ಲದೇಪೂಜಾ ಪಟದೊಂದಿಗೆ ಚಾಮನಹಳ್ಳಿಗ್ರಾಮದ ಪ್ರಮುಖ ಬೀದಿಗಳಲ್ಲಿತಮಟೆ, ನಗಾರಿ, ಕೀಲು ಕುದುರೆ,ಮೆರವಣಿಗೆ ಬಾಯಿ ಬೀಗ, ತಲೆಮುಡಿಸೇವಾ ಕೈಂಕರ್ಯ ಜರುಗಿದವು.
ಖಾಸಗಿವಾಹಿನಿಯ ಸರಿಗಮ ರನ್ನರ್ ಅಪ್,ಕಂಬದ ರಂಗಯ್ಯ, ವರ್ಣ ಚೌವ್ಹಾಣ್ಹಾಗೂ ಶಿವಾರ ಉಮೇಶ್ತಂಡದವರಿಂದ ಭಕ್ತಿಗಾನ ಸಾಂಸ್ಕೃತಿಕಕಾರ್ಯಕ್ರಮ ಆಯೋಜನೆಗೊಂಡಿತ್ತು.ಚಾಮನಹಳ್ಳಿ ಸೇರಿದಂತೆ ಇನ್ನಿತರೆಗ್ರಾಮಗಳಿಂದ ಆಗಮಿಸಿ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ