ಸೌರ ಕನ್ನಡಕದಲ್ಲಿ ಗ್ರಹಣ ವೀಕ್ಷಣೆ
Team Udayavani, Jun 22, 2020, 5:48 AM IST
ಮಂಡ್ಯ: ನಗರದ ಕಾವೇರಿ ಬಡಾವಣೆಯಲ್ಲಿರುವ ನಂದಿ ಉದ್ಯಾನವನದಲ್ಲಿ ಜಿಲ್ಲಾ ವಿಜ್ಞಾನ ವೇದಿಕೆಯಿಂದ ಸೂರ್ಯ ಗ್ರಹಣ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರ್ವಜನಿಕರು ಹಾಗೂ ಮಕ್ಕಳು ಸೋಲಾರ್ ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿ ಕುತೂಹಲವನ್ನು ತಣಿಸಿಕೊಂಡರು. ವಿಜ್ಞಾನ ಸಂಪನ್ಮೂಲ ವ್ಯಕ್ತಿ ಡಾ.ಜಿ.ಪಿ.ಶಿವಶಂಕರ್ ಮಾತನಾಡಿದರು.
8 ತಿಂಗಳಲ್ಲಿ ಎರಡನೇ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡುತ್ತಿದ್ದೇವೆ. 2020ರ ಮೊದಲ ಸೂರ್ಯ ಗ್ರಹಣವನ್ನು ನಾವು ವೀಕ್ಷಣೆ ಮಾಡಿದ್ದೇವೆ. ರಾಹು ಮತ್ತು ಕೇತು ಎನ್ನುವಂತಹವು ಎರಡು ಛೇಧನ ಬಿಂದುಗಳು ಮತ್ತು ಇವು ಕಾಲ್ಪನಿಕ ಬಿಂದುಗಳು. ಸೂರ್ಯ ಪಥ ಮತ್ತು ಚಂದ್ರನಪಥ ಎರಡು ಛೇಧಿಸುತ್ತೆ. ಸೂರ್ಯನ ಸುತ್ತ ಭೂಮಿ 23 ಡಿಗ್ರಿಯಾಗಿ ಓರೆಯಾಗಿಸುತ್ತಿದರೆ, ಭೂಮಿಯ ಸುತ್ತ ಚಂದ್ರ 5 ಡಿಗ್ರಿ ಓರೆಯಾಗಿ ಸುತ್ತುತ್ತಾನೆ.
ಈ ಎರಡೂ ಕೋನಗಳು ವ್ಯತ್ಯಾಸವಾದ್ದ ರಿಂದ ಈ ಎರಡೂ ಛೇಧನ ಬಿಂದುಗಳನ್ನು ರಾಹು ಮತ್ತು ಕೇತು ಎಂದು ಕರೆಯುತ್ತಾರೆ ಎಂದರು. ಡಿಸೆಂಬರ್ನಲ್ಲಿ ಕೇತು ಬಿಂದುವಿನಲ್ಲಿ ಭೂಮಿ, ಸೂರ್ಯ, ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಿದ್ದವು. ಈಗ ರಾಹು ಬಿಂದುವಿನಲ್ಲಿ ಈ ಮೂರೂ ಒಂದೇ ಸರಳ ರೇಖೆ ಯಲ್ಲಿ ಬಂದಿರುವುರಿಂದ ಸೂರ್ಯಗ್ರಹಣವಾಗುತ್ತಿದೆ.
ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಇದು ಅಮಾವಾಸ್ಯೆ ದಿನವೇ ಸಂಭವಿಸುತ್ತ ದೆ ಎಂದು ವಿವರಿಸಿದರು. ಪಿಇಟಿ ಟ್ರಸ್ಟ್ ನಿರ್ದೇಶಕ ಡಾ.ರಾಮಲಿಂಗಯ್ಯ ಮಾತ ನಾಡಿ, ಗ್ರಹಣ ವೀಕ್ಷಣೆ ಬಗ್ಗೆ ಜನರಲ್ಲಿರುವ ಮೌಡ್ಯವನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು. ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್, ನಂಜರಾಜು, ವಕೀಲ ಬಿ.ಟಿ.ವಿಶ್ವನಾಥ್, ಜಗದೀಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ