2023ಕ್ಕೆ ನನ್ನ ಸ್ಪರ್ಧೆ ಖಚಿತ: ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ
Team Udayavani, Dec 19, 2021, 1:35 PM IST
ನಾಗಮಂಗಲ: 2023ಕ್ಕೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸ ಲಿದ್ದು,ಮುಂಬರುವ ಸಂಕ್ರಾಂತಿಯ ನಂತರ ತಾಲೂಕಿ ನಾದ್ಯಾಂತ ಪ್ರವಾಸ ಹಮ್ಮಿ ಕೊಳ್ಳು ತ್ತೇನೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದರು.
ನಾಗಮಗಲ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ 2 ಬಾರಿ ಶಾಸಕನಾಗಿ, ಒಂದು ಬಾರಿ ಸಂಸದನಾಗಿ ಆಯ್ಕೆಯಾಗಿ ಜನಸೇವೆ ಮಾಡಿ ದ್ದೇನೆ. ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಹಿತ ಕಾಯುವ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿತನಾಗಿದ್ದು, ಜೆಡಿಎಸ್ ನಿಂದಲೇ ಕಣಕ್ಕಿಳಿಯುತ್ತೇನೆ. ತಾಲೂಕಿನ ಜನತೆಯ ನಾಡಿ ಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ತಾಲೂಕಿನ ಜನತೆಯ ಹಿತ ಕಾಯಲು ನನ್ನ ಸ್ಪರ್ಧೆ ಅನಿವಾರ್ಯವೆಂದರು.
ವಿಶ್ವಾಸವಿದೆ: 2023ಕ್ಕೆ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಂಡಾತುಂಡಾಗಿ ತಿಳಿಸಿದರಲ್ಲದೇ, 2023ಕ್ಕೆ ನನ್ನ ಸ್ಪರ್ಧೆಯ ವಿಷಯವನ್ನು ಈಗಾಗಲೇ ನಮ್ಮ ವರಿಷ್ಠರಾದ ದೇವೇಗೌಡರು, ಕುಮಾರಣ್ಣನವರ ಗಮನಕ್ಕೆ ತಂದಿದ್ದು, ಟಿಕೆಟ್ ಕೊಡುವ ಸಂಪೂರ್ಣ ವಿಶ್ವಾಸ ನನಗಿದೆ ಎಂದರು.
ಷಡ್ಯಂತ್ರದಿಂದ ಅಪ್ಪಾಜಿಗೌಡರ ಸೋಲು: ಅಪ್ಪಾಜಿಗೌಡರ ಸೋಲು ಜೆಡಿಎಸ್ ಸೋಲಲ್ಲ. ಜೆಡಿಎಸ್ ಬೆಂಬಲಿತ ಮತದಾರರು 1900 ಮಾತ್ರ ಇತ್ತು. ಅಷ್ಟೂ ಮತಗಳನ್ನು ನಾವು ಪಡೆದುಕೊಂಡಿದ್ದೇವೆ. ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲೇ ಬೇಕು ಎಂದುಪಣ ತೊಟ್ಟು ಕಾಂಗ್ರೆಸ್, ಬಿಜೆಪಿ, ರೈತ ಸಂಘಮಾಡಿಕೊಂಡ ಒಳ ಒಪ್ಪಂದದ ಷಡ್ಯಂತ್ರದಿಂದ ಅಪ್ಪಾಜಿಗೌಡರಿಗೆ ಸೋಲಾಯಿತು ಎಂದರು.
ಅಭಿವೃದ್ಧಿ ಕೆಲಸ: ರಾಜಕೀಯ ಮುತ್ಸದಿ ಅಪ್ಪಾಜಿಗೌಡ: ನಾನು ನನ್ನ ರಾಜಕೀಯ ಜೀವನದಲ್ಲಿ ಕಂಡಂತೆ ಅತ್ಯಂತ ಶಿಸ್ತು ಮತ್ತು ನಿಷ್ಟಾವಂತರು ಯಾರಾದರೂ ಇದ್ದರೆ ಅದು ಅಪ್ಪಾಜಿಗೌಡರು ಮಾತ್ರ. ಅವರು ತಮ್ಮ ಅಧಿಕಾರಾವಧಿಯಲ್ಲಿ ಯಾರ ಮನಸ್ಸಿಗೂನೋವುಂಟು ಮಾಡಿಲ್ಲ. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತದಾರರು ಜೆಡಿಎಸ್ ಬಿಟ್ಟು ಎಲ್ಲೂ ಹೋಗಲ್ಲ. ಕಾಂಗ್ರೆಸ್ಗೆಲ್ಲಿಸಿದ್ದೇವೆ, ಇನ್ನೇನು ಜೆಡಿಎಸ್ ಕಥೆ ಮುಗಿದೇಹೋಯಿತು ಎಂದು ವಿರೋಧಿಗಳು ಬೀಗಬೇಕಾಗಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಈಗಲೂಬಲಿಷ್ಟವಾಗಿದ್ದು, ಮುಂಬರುವ ತಾಪಂ,ಜಿಪಂನಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಅಧಿಕಾರ ಹಿಡಿಯಲಿದ್ದೇವೆಂದರು.
ದಿನೇಶ್ಗೂಳಿಗೌಡ ನನ್ನ ಸ್ನೇಹಿತನಾದರೂ ಅವರಿಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ, ರಾಜಕೀಯದ ಅನುಭವ ಮೊದಲೇ ಇರಲಿಲ್ಲ. ಒಬ್ಬ ಸಚಿವರ ಹತ್ತಿರ ಆಪ್ತ ಸಹಾಯಕರಾಗಿದ್ದ ಅಧಿಕಾರಿಯನ್ನು ಕರೆದುಕೊಂಡು ಬಂದು ಒಬ್ಬ ರಾಜಕೀಯ ಮುತ್ಸದ್ಧಿ ಅಪ್ಪಾಜಿಗೌಡರನ್ನು ಸೋಲಿಸಿದ್ದಾರೆ. ಹಣ ಬೆಂಬಲದಿಂದ ಕಾಂಗ್ರೆಸ್ ಗೆದ್ದಿದೆಯೇ ಹೊರತು ಜನಬೆಂಬಲದಿಂದ ಅಲ್ಲ. –ಎಲ್.ಆರ್.ಶಿವರಾಮೇಗೌಡ, ಮಾಜಿ ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?