ಚೆಲುವನ ವಾಹನ ಮಂಟಪದಲ್ಲಿ ಕಸದ ರಾಶಿ
Team Udayavani, Feb 23, 2020, 3:35 PM IST
ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ವಾಹನೋತ್ಸವ ಮಂಟಪದಲ್ಲಿ ಕಸದರಾಶಿ ತುಂಬಿದ್ದು, ಭಾರತ ಸರ್ಕಾರದ ಸ್ವಚ್ಛಭಾರತ್, ಮುಜರಾಯಿ ಇಲಾಖೆಯ ಸ್ವಚ್ಛದೇಗುಲ ಅಭಿಯಾನ ವನ್ನು ಅಣಕಿಸುವಂತಿದೆ. ಮತ್ತೂಂದೆಡೆ ಬೃಹತ್ ಜನರೇಟ ರನ್ನು ಐತಿಹಾಸಿಕ ಮಂಟಪದಲ್ಲೇ ಇಡಲಾಗಿದ್ದು ಭಾರೀ ಶಬ್ದ ಮಂಟಪದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ.
ಕಸದ ಕೊಂಪೆ: ಸ್ವತಃ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರೇ ಸೂಚನೆ ನೀಡಿದ್ದರೂ ಕನಿಷ್ಠ ಸ್ವತ್ಛಗೊಳಿಸುವ ಕಾರ್ಯವನ್ನು ದೇಗುಲದ ಪ್ರಭಾರಿ ಅಧಿಕಾರಿ ಮಾಡದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಚೆಲುವನಾರಾಯಣಸ್ವಾಮಿಯ ವಾಹನೋತ್ಸವಗಳು ಆರಂಭವಾಗುವ ಮತ್ತು ವೈರಮುಡಿ ಉತ್ಸವ ಮುಕ್ತಾಯವಾಗಿ ಪ್ರಪ್ರಥವಾಗಿ ರಾಜಮುಡಿ ಕಿರೀಟಧಾರಣೆಯಾಗುವ ರಾಜ ಒಡೆಯರ್ ನಿರ್ಮಿಸಿದರೆನ್ನಲಾದ ಐತಿಹಾಸಿಕ ಮಂಟಪ ಇದೀಗ ಕಸದ ಕೊಂಪೆಯಾಗಿದೆ.
ಅನಗತ್ಯ ವಸ್ತುಗಳನ್ನು ತುಂಬಲಾಗಿದೆ: ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗವೇ ಇರುವ ಬೃಹತ್ ಮಂಟಪದಲ್ಲಿ ಬೇಡದ ಹಾಗೂ ಅನಗತ್ಯ ವಸ್ತುಗಳನ್ನು ತುಂಬಲಾಗಿದೆ. ಮುರಕಲು ಕುರ್ಚಿಗಳು, ಹರಿದ ಬಟ್ಟೆಗಳು ಚಲ್ಲಾಡಿವೆ, ಮುರಿದ ವಸ್ತುಗಳು ರಾಜ್ಯಭಾರ ಮಾಡಿವೆ. ತೆಪ್ಪೋತ್ಸವಕ್ಕೆ ಬಳಸಿದ ಕಬ್ಬಿಣದ ಡ್ರಮ್ ಗಳನ್ನು ಗರುಡದೇವನ ಮುಂದೆ ತುಂಬಲಾಗಿದೆ. ತುಕ್ಕುಹಿಡಿದ ಜನರೇಟರ್ಗಳು, ಬಳಕೆಗೆ ಬಾರದ ಬೊಂಬುಗಳ ರಾಶಿ, ನಾಮಫಲಕಗಳು ಸುಣ್ಣದ ಮೂಟೆಗಳನ್ನು ಮಂಟಪದಲ್ಲೇ ಬಿಸಾಡಲಾಗಿದೆ.
ಗರುಡದೇವನಿಗಿಲ್ಲ ಪೂಜೆ: ವೈರಮುಡಿ ಬ್ರಹ್ಮೋತ್ಸವ ಸೇರಿದಂತೆ ಎಲ್ಲಾ ಜಾತ್ರಾ ಮಹೋತ್ಸವದಲ್ಲಿ ಗರುಡ ಧ್ವಜಾರೋಹಣ ಮಾಡಿ ಉತ್ಸವಕ್ಕೆ ದೇವತೆಗಳನ್ನು ಆಹ್ವಾನಿಸಿ ಬ್ರಹ್ಮೋತ್ಸವ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಇಂತಹ ಮಹತ್ವದ ಗರುಡನ ಸನ್ನಿಧಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಯ ನಿರ್ಲಕ್ಷ್ಯತನದಿಂದ ಕಸದ ಬೀಡಾಗಿದೆ.ತೆಪೋತ್ಸವಕ್ಕೆ ಬಳಸಿದ್ದ ಡ್ರಮ್ ಗಳನ್ನು ಗರುಡದೇವನ ಗರ್ಭಗುಡಿಯಲ್ಲೇ ಬಿಸಾಡಿದ ಕಾರಣ ಗರುಡನಿಗೆ ಪೂಜೆ ಇಲ್ಲದಂತಾಗಿದೆ. ಗರುಡ ಅಳುತ್ತಿದ್ದಾನೆ. ಅಧಿಕಾರಿ ವಾಹನ ಮಂಟಪದ ಸ್ವಚ್ಛತೆಯ ಬಗ್ಗೆ ಕೊಂಚ ಕಾಳಜಿ ವಹಿಸಿ ಕಸವನ್ನು ತೆಗೆಸಿ ಅಗತ್ಯವಸ್ತುಗಳಿದ್ದರೆ ವ್ಯವಸ್ಥಿತವಾಗಿ ಜೋಡಿಸಿಡಲು ಕ್ರಮ ವಹಿಸಿ, ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಈ ಬಗ್ಗೆ ಅಧಿಕಾರಿಯನ್ನು ಸಂಪರ್ಕಿಸಿದರೆ ಉದ್ದಟತನವಾಗಿ ವರ್ತಿಸಿ ಪೋನ್ ಕಡಿತಮಾಡುತ್ತಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?