ಒಂದು ತಿಂಗಳಿಂದ ಕೆಲಸ ಬಿಟ್ಟು ಪಡಿತರಕ್ಕಾಗಿ ಅಲೆದಾಟ
Team Udayavani, Jan 28, 2020, 7:20 PM IST
ಕೆ.ಆರ್.ಪೇಟೆ: ತಾಲೂಕಿನಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಓಪನ್ ಆಗದ ಆ್ಯಪ್ ಖಾಸಗಿ ಕಂಪ್ಯೂಟರ್ ಸೆಂಟರ್ಗಳಲ್ಲಿ ಮಾತ್ರ ಹಣ ನೀಡಿದರೆ ಓಪನ್ ಆಗುತ್ತಿರುವ ಬಗ್ಗೆ ಅಧಿಕಾರಿಗಳ ಮೇಲೆ ಜನರಲ್ಲಿ ಅನುಮಾನ ಮೂಡುತ್ತಿದೆ.
ಪಡಿತರು ವಿತರಣೆಯಲ್ಲಿ ಅಕ್ರಮ ತಡೆಯುವ ಸಲುವಾಗಿ ಸರ್ಕಾರ ಆಧಾರ್ ಲಿಂಕ್ ಮಾಡಿಸುವ ಜೊತೆಗೆ ಪಡಿತರ ವಿತರಣೆ ಮಾಡುವ ಮುನ್ನ ಕಾರ್ಡ್ ನಲ್ಲಿರುವ ವ್ಯಕ್ತಿ ಬಂದು ಅವರ ಹೆಬ್ಬೆಟ್ಟನ್ನು ಕಂಪ್ಯೂಟರ್ಗೆ ನೀಡಿದ ಬಳಿಕವಷ್ಟೇ ಸರ್ಕಾರದಿಂದ ಅವರ ಕಾರ್ಡ್ಗೆ ಪಡಿತರ ಬಿಡುಗಡೆಯಾಗುತ್ತದೆ. ಆದರೆ ತಾಲೂಕು ಸೇರಿದಂತೆ ರಾಜ್ಯದಲ್ಲಿಯೇ ಪಡಿತರ ವಿತರಣಾ ಆಪ್ಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಜನವರಿ ತಿಂಗಳು ಮುಗಿಯುತ್ತಿದ್ದರೂ ಇದು ವರೆಗೂ ತಾಲೂಕಿನ ಯಾವ ನ್ಯಾಯಬೆಲೆ ಅಂಗಡಿ ಯಲ್ಲೂ ಪಡಿತರ ವಿತರಿಸಿಲ್ಲ. ತಾಲೂಕಿನಲ್ಲಿ ಹೆಬ್ಬೆಟ್ಟು ಪಡೆಯುವ ಆಪ್ ಸಮಸ್ಯೆಯಿಂದ ಜನರು ಒಂದು ವಾರದಿಂದ ಪಡಿತರ ಪಡೆಯಲು ಅಲೆದಾಡುತ್ತಿದ್ದಾರೆ.
ಪರಿತರಕ್ಕೆ ನಾಲ್ಕೇ ದಿನ ಬಾಕಿ: ನಾಲ್ಕು ದಿನ ಕಳೆದರೆ ಜನವರಿ ತಿಂಗಳು ಮುಕ್ತಾಯವಾಗಿ ಫೆಬ್ರವರಿ ತಿಂಗಳು ಆರಂಭವಾಗುತ್ತದೆ. ಜನವರಿ ತಿಂಗಳ ಬಾಪು ಪಡಿತರ ಫೆಬ್ರವರಿ ತಿಂಗಳು ನೀಡುವುದಿಲ್ಲ. ಸಮಸ್ಯೆ ಅರಿತಿರುವ ಮಡಿಕೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜನವರಿ ತಿಂಗಳ ಪಡಿತರ ಹಿಂದಿನ ಪದ್ಧತಿಯಂತೆ ವಿತರಿಸಲು ಅನುಮತಿ ನೀಡಲಾಗಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕೆಂದು ಪಡಿತರದಾರರು ಮನವಿ ಮಾಡಿದ್ದಾರೆ.
ಕಂಪ್ಯೂಟರ್ ಸೆಂಟರ್ಗಳಲ್ಲಿ: ಸರ್ಕಾರದಿಂದ ತೆರೆದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣಾ ಆಪ್ ಓಪನ್ ಆಗದೆ, ಖಾಸಗಿ ಕಂಪ್ಯೂಟರ್ ಸೆಂಟರ್ಗಳಲ್ಲಿ ಮಾತ್ರ ಓಪನ್ ಆಗುತ್ತಿರುವುದನ್ನು ಕಂಡು ಪಡಿತರದಾರರು ಹಣ ಕೊಟ್ಟರೂ ಪರವಾಗಿಲ್ಲ, ಸದ್ಯ ಆ್ಯಪ್ ಓಪನ್ ಆಗಿ ಹೆಬ್ಬಟ್ಟು ಕೊಟ್ಟರೆ ಸಾಕೆಂದು ಖಾಸಗಿ ಕಂಪ್ಯೂಟರ್ ಸೆಂಟರ್ಗಳ ಮುಂದೆ ಕೆಲಸ ಬಿಟ್ಟು ಸರದಿಯಲ್ಲಿ ನಿಂತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?