ಸಾಲದ ಹಣಕ್ಕೆ ಬಡ್ಡಿ ನೀಡದ್ದಕ್ಕೆ ಹಲ್ಲೆ, ಶಾಂತಿಸಭೆ
Team Udayavani, Apr 12, 2021, 12:54 PM IST
ಪಾಂಡವಪುರ: ತಾವು ನೀಡಿರುವ ಸಾಲದ ಹಣಕ್ಕೆ ಬಡ್ಡಿ ನೀಡಲಿಲ್ಲ ಎಂಬ ಕಾರಣಕ್ಕೆ ಕುಟುಂಬವೊಂದರ ಮೇಲೆ ಯುವಕರ ಗುಂಪೊಂದು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಸಿ.ಎಸ್.ಪುಟ್ಟರಾಜು ನೊಂದ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿ ಶಾಂತಿ ಸಭೆ ನಡೆಸಿದರು.
ಮೂರು ಸಾವಿರ ರೂ. ಸಾಲ: ಪಟ್ಟಣದವಿ.ಸಿ.ಕಾಲೋನಿಯಲ್ಲಿ ಸದ್ದಾಂ ಹುಸೇನ್ ಕುಟುಂಬದವರು ಇದೇ ಬಡಾವಣೆ ಯುವಕ ಪ್ರಜ್ವಲ್ ಎಂಬುವರಿಂದ 3 ಸಾವಿರ ರೂ. ಸಾಲದ ರೂಪದಲ್ಲಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಸಾಲಕ್ಕೆ ಬಡ್ಡಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ಹಣ ನೀಡಿದ್ದ ಪ್ರಜ್ವಲ್ ಸೇರಿದಂತೆ ಈತನ ಸ್ನೇತಹಿರ ಗುಂಪು ಸದ್ದಾಂ ಹುಸೇನ್ ಮನೆಗೆ ನುಗ್ಗಿಕುಟುಂಬಸ್ಥರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಂತ್ವನ: ಘಟನೆಗೆ ಸಂಬಂಧಪಟ್ಟಂತೆ ಸಮಾಧಾನ ಹೇಳಲು ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿಪುರಸಭೆ ಸದಸ್ಯ ಆರ್.ಸೋಮಶೇಖರ್ ಹಾಗೂಸ್ಥಳೀಯ ಮುಖಂಡರಾದ ಮಹಮದ್ ಹನೀಫ್,ಸಹಿಫುಲ್ಲಾ ಖಾನ್, ನಜೀರ್ ಅಹಮದ್,ಮಸೀಮಾ, ಮುಜಾದ್, ಬಾಬು ಸೇರಿದಂತೆ ಅನೇಕ ಹಿರಿಯ ಮುಖಂಡರೊಂದಿಗೆ ಘಟನೆ ಬಗ್ಗೆಚರ್ಚಿಸಿ, ಹಲ್ಲೆಗೊಳಗಾದ ಕುಟುಂಬದ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಹಲ್ಲೆಗೊಳಗಾದ ಮಹಿಳೆಗೆ ಸಂಪೂರ್ಣ ಚಿಕಿತ್ಸೆ ಕೊಡಿಸಲಾಗುವುದು. ವಿ.ಸಿ.ಕಾಲೋನಿಬಡಾವಣೆಯಲ್ಲಿ ಎಲ್ಲಾ ಜಾತಿ, ಧರ್ಮದವರುಒಗ್ಗೂಡಿ ಸಮಾನತೆಯಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಆದರೆ ಕೆಲವರಿಂದ ಇಂತಹ ಕೆಟ್ಟಘಟನೆ ನಡೆದಿದೆ. ಈ ಬಗ್ಗೆ ಎರಡೂ ಕಡೆಯಮುಖಂಡರೊಂದಿಗೆ ಶೀಘ್ರದಲ್ಲಿ ಶಾಂತಿ ಸಭೆನಡೆಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆನಡೆಯದಂತೆ ಜಾಗ್ರತೆ ವಹಿಸಲಾಗುವುದು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶಾಸಕರ ಮಾತಿಗೆ ಸಮ್ಮತಿಸಿದರು.
ನಂತರ ಬಡಾವಣೆಯ ಗಣಪತಿ ದೇವಸ್ಥಾನದಆವರಣದಲ್ಲಿ ಮತ್ತೂಂದು ಗುಂಪಿನಮುಖಂಡರೊಂದಿಗೆ ಶಾಸಕ ಸಿ.ಎಸ್.ಪುಟ್ಟರಾಜುಘಟನೆ ಬಗ್ಗೆ ಚರ್ಚೆ ನಡೆಸಿ, ಇಂತಹ ಘಟನೆನಡೆಯಬಾರದು ಎಂದು ಸಂಬಂಧಪಟ್ಟವರಿಗೆಸೂಚಿಸಿ, ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆಪಡೆದುಕೊಂಡ ನಂತರ ಶಾಂತಿಸಭೆ ನಡೆಸಿತೀರ್ಮಾನಿಸೋಣ ಎಂದು ಬುದ್ಧಿ ಹೇಳಿ ಎರಡೂಗುಂಪಿನವರೂ ಶಾಂತಿ ಕಾಪಾಡುವಂತೆಸೂಚಿಸಿದರು. ನೊಂದ ಕುಟುಂಬಸ್ಥರ ನಿವಾಸಹಾಗೂ ವಿ.ಸಿ.ಕಾಲೋನಿಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…