ಉದ್ದಿನಮಲ್ಲನಹೊಸೂರಲ್ಲಿ ನೀರಿಗಾಗಿ ಪರದಾಟ
ಗ್ರಾಮದಲ್ಲಿ ಮೂಲ ಸೌಲಭ್ಯಗಳೂ ಇಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ: ಗ್ರಾಮಸ್ಥರ ಆರೋಪ
Team Udayavani, Jun 22, 2019, 4:16 PM IST
ಕಿಕ್ಕೇರಿ ಹೋಬಳಿಯ ಉದ್ದಿನಮಲ್ಲನ ಹೊಸೂರು ಗ್ರಾಮದಲ್ಲಿ ಖಾಲಿ ಬಿದ್ದಿರುವ ಕುಡಿಯುವ ನೀರಿನ ತೊಂಬೆ.
ಕಿಕ್ಕೇರಿ: ಹೋಬಳಿಯ ಉದ್ದಿನಮಲ್ಲನಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮ ಚಿಕ್ಕದಾಗಿದ್ದರೂ ನೀರಿನ ಸಮಸ್ಯೆ ದೊಡ್ಡದಾಗಿದೆ. ಗ್ರಾಮ ಯಾವುದೇ ಮೂಲ ಸೌಲಭ್ಯಗಳನ್ನು ಕಂಡಿಲ್ಲ. ಡಾಂಬರು ರಸ್ತೆ, ಸಂಚಾರ ಸೌಲಭ್ಯವೂ ಇಲ್ಲ. ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸುವುದಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಬಂದು ಭರವಸೆಗಳು ಸುರಿಸಿ ಹೋದರೆ ಮತ್ತೆ ಚುನಾವಣೆ ಬರುವವರೆಗೂ ಇತ್ತ ಮುಖ ಹಾಕಲ್ಲ.
ಲಕ್ಷ್ಮೀಪುರ ಗ್ರಾಪಂಗೆ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 40 ಕುಟುಂಬಗಳಿದ್ದು 250 ಜನಸಂಖ್ಯೆ ಇದೆ. ಕೃಷಿಯಾಧಾರಿತ ಗ್ರಾಮದಲ್ಲಿ ಕುಡಿಯಲು ನೀರಿಲ್ಲ, ಬೇಸಾಯಕ್ಕೂ ನೀರಿಲ್ಲದಂತಾಗಿದೆ. ಮಳೆ ಬಂದರೆ ಗ್ರಾಮದಲ್ಲಿ ನೀರು ಸಮೃದ್ಧಿಯಾಗಿದೆ. ಬೇಸಿಗೆಯ ಝಳಕ್ಕೆ ಗ್ರಾಮದಲ್ಲಿನ ಬಹುತೇಕ ಕೃಷಿ ಪಂಪ್ಸೆಟ್ಗಳು ಬತ್ತಿ ಹೋಗಿವೆ. ಗ್ರಾಮದಲ್ಲಿ 6 ನೀರಿನ ತೊಂಬೆಗಳಿದ್ದು, ಒಂದೆರಡರಲ್ಲಿ ಜಿನುಗುತ್ತಿದ್ದ ನೀರು ಕೂಡ ಬರಿದಾಗಿದೆ. ಹಲವು ನೀರಿನ ತೊಂಬೆಗಳು ನಾಮಕೇವಸ್ತೆಗೆ ನಿರ್ಮಾಣವಾದಂತಿವೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯೂ ಇದ್ದು, ತೊಂಬೆಗೆ ನೀರು ತುಂಬಿಸುವುದು ಸಮಸ್ಯೆಯಾಗಿದೆ. ವಿದ್ಯುತ್ ಇದ್ದರೆ ಕೊಳವೆ ಬಾವಿಯಲ್ಲಿ ನೀರು ಬರುವುದಿಲ್ಲ. ಗ್ರಾಮದಲ್ಲಿರುವ ರೈತರ ಕೊಳವೆ ಬಾವಿಯಲ್ಲಿ ಕಾಡಿಬೇಡಿ ಗ್ರಾಮಸ್ಥರು ನೀರು ತುಂಬಿಸಿಕೊಳ್ಳುವುದು ನಿತ್ಯ ರೋಧನವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈಗಲಾದರೂ ಇತ್ತ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…