ಎಂದು ಸಿಹಿ ನೀಡಲಿದೆ ಮೈಶುಗರ್‌?


Team Udayavani, Jan 21, 2021, 7:13 AM IST

ಎಂದು ಸಿಹಿ ನೀಡಲಿದೆ ಮೈಶುಗರ್‌?

ಮೈಶುಗರ್‌ ಕಾರ್ಖಾನೆ. ಇದು ಕೇವಲ ಹೆಸರಲ್ಲ. ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ದಶಕಗಳಿಂದ ಸಹಸ್ರಾರು ಜನರಿಗೆ, ಕುಟುಂಬಗಳಿಗೆ ಅನ್ನದಾತ ಸಂಸ್ಥೆಯಾಗಿದ್ದ ಈ ಕಾರ್ಖಾನೆ ಈಗ ಸುದ್ದಿ ಮಾಡುತ್ತಿದೆ. ಈಗ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರಕಾರ ಆದೇಶಿಸಿದೆ. ಇದರ ವಿರುದ್ಧ ವಿವಿಧ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೆ, ಕೆಲವರು ಒ ಆ್ಯಂಡ್‌ ಎಂ ಆಧಾರದಲ್ಲಿ ನಡೆಸು ವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ರೈತರು ಮಾತ್ರ ಯಾರಾದರೂ ನಡೆಸಲಿ ಕಾರ್ಖಾನೆ ಆರಂಭಗೊಂಡರೆ ಸಾಕು ಎಂಬ ಮನಃಸ್ಥಿತಿಯಲ್ಲಿದ್ದಾರೆ.

ಆಡಳಿತ ವರ್ಗದ ಲೋಪ, ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ, ಅನಗತ್ಯ ಖರ್ಚು ಸೇರಿದಂತೆ ಅನೇಕ ಸಮಸ್ಯೆಗಳಿಂದಾಗಿ ಕಾರ್ಖಾನೆ ಅಧೋಗತಿಗೆ ಸಾಗುತ್ತಲೇ ಹೋಯಿತು. 86 ವರ್ಷಗಳ ಇತಿಹಾಸದಲ್ಲಿ 1999 ರಿಂದ ನಷ್ಟ ತೋರಿಸುತ್ತಾ, 2004ರಲ್ಲಿ ರೋಗ ಗ್ರಸ್ಥ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡಿತು ಮೈಶುಗರ್ಸ್‌.

ಮೈಶುಗರ್‌ ಪುನರುತ್ಥಾನಕ್ಕಾಗಿ ಇದುವರೆಗೂ ಸರಕಾರಗಳು ಸುಮಾರು 522 ಕೋಟಿ ರೂ. ಅನುದಾನ ನೀಡಿವೆ. ಆದರೆ ಕಾರ್ಖಾನೆ ಮಾತ್ರ ಪುನಶ್ಚೇತನಗೊಳ್ಳಲೇ ಇಲ್ಲ. ಸರಕಾರ ಈಗಾಗಲೇ 40 ವರ್ಷಗಳ ಅವಧಿಗೆ ಮೈಶುಗರ್‌ ಅನ್ನು ಗುತ್ತಿಗೆ ನೀಡಲು ಟೆಂಡರ್‌ ಕರೆಯುವಂತೆ ಆದೇಶ ಹೊರಡಿಸಿದೆ. ಇದರ ನಡುವೆಯೇ ಕಾರ್ಖಾನೆಗೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಆದರೆ ಯಾವುದೇ ಕಾರ್ಯ ಯೋಜನೆಗಳು ಪ್ರಗತಿ ಕಾಣುತ್ತಿಲ್ಲ. ಇದರಿಂದಾಗಿ ಪ್ರಸ್ತುತ ವರ್ಷ ಕೆಲಸಗಳು ಆರಂಭವಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಮೈಶುಗರ್‌ನ ಇತಿಹಾಸವೇ ರೋಚಕ. ಮಂಡ್ಯ ಜಿಲ್ಲೆಯ ರೈತರ ಅಭ್ಯುದಯ ಹಾಗೂ ಕಬ್ಬು ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ, 1933ರ ಜ. 30ರಂದು ಕೃಷಿ ವಿಜಾnನಿಯಾಗಿದ್ದ ಡಾ| ಲೆಸ್ಲಿ ಸಿ.ಕೋಲ್ಮನ್‌ ಅವರು ಸಕ್ಕರೆ ಕಾರ್ಖಾನೆ ನಿರ್ಮಿಸುವಂತೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ  ವರದಿ ಸಲ್ಲಿಸಿದರು. ಕೂಡಲೇ ಈ ಶಿಫಾರಸಿನ ಮಹತ್ವ ಅರಿತ ಒಡೆಯರ್‌ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದರು. ಕಾರ್ಖಾನೆ ಆರಂಭಕ್ಕೆ ರೂಪರೇಖೆ ರಚಿಸಿದವರು ಸರ್‌| ಎಂ.ವಿಶ್ವೇಶ್ವರಯ್ಯ. ಒಡೆಯರ್‌ ಮುತುವರ್ಜಿ ಯ ಫ‌ಲವಾಗಿ 20 ಲಕ್ಷ ರೂ. ಷೇರು ಬಂಡವಾಳ ದೊಂದಿಗೆ ಜಾಯಿಂಟ್‌ ಸ್ಟಾಕ್‌ ಕಂಪೆನಿಯಾಗಿ ಮೈಸೂರು ಸಕ್ಕರೆ ಕಾರ್ಖಾನೆಯು ರೈತರ ಸುಮಾರು 14,046 ಷೇರು ಹಣ ಹಾಗೂ ಸರಕಾರದ ಹಣಕಾಸಿನ ನೆರವಿನೊಂದಿಗೆ ಆರಂಭವಾಯಿತು. ದೇಶದ ಮೊದಲ ಸರಕಾರಿ ಕಾರ್ಖಾನೆ ಇದು!

1999ರ ವರೆಗೂ ಮೈಶುಗರ್‌ ಲಾಭದಲ್ಲೇ ಇತ್ತು. ಆದರೆ ದಕ್ಷ ಅಧಿಕಾರಿಗಳ ಕೊರತೆ, ರಾಜಕಾರಣ, ಕಾರ್ಮಿಕರ ಸಮಸ್ಯೆ, ಆಡಳಿತ ವೈಫ‌ಲ್ಯ ಹಾಗೂ ಕಾರ್ಖಾನೆಯ ಯಂತ್ರಗಳಿಗೆ ಪ್ರತೀ ವರ್ಷ ಖರೀದಿಸುವ ಬಿಡಿ ಭಾಗಗಳು ಕಳಪೆಯಿಂದ ಕೂಡಿರುವುದರಿಂದ ಸಮಸ್ಯೆಯಾಯಿತು.

ಇತ್ತೀಚೆಗೆ ಅಧಿಕಾರಿಗಳು ನೀಡಿದ ವರದಿಯಲ್ಲಿ ಜಿಲ್ಲೆಯ ಯಾವುದೇ ಕಾರ್ಖಾನೆಗಳಿಗಿಲ್ಲದಂಥ ಆದಾಯದ ಮೂಲಗಳು ಮೈಶುಗರ್‌ ಕಾರ್ಖಾನೆಯಲ್ಲಿದೆ! ಸಕ್ಕರೆ ಉತ್ಪಾದನೆ, ಮೊಲಾಸಸ್‌, ವಿದ್ಯುತ್‌, ಪ್ರಸ್‌ ಮೆಡ್‌ ಸಹಿತ ಬೆಂಗಳೂರಿನ ವಾಣಿಜ್ಯ ಕಟ್ಟಡಗಳಿಂದ ಆದಾಯ ಬರಲಿದೆ. ಪ್ರತೀ ವರ್ಷ 12.16 ಕೋಟಿ ರೂ. ಲಾಭ ಸಿಗಲಿದೆ ಎಂದು ವರದಿ ಸಲ್ಲಿಸಿರುವುದು ವಿಶೇಷ. ಒಟ್ಟಲ್ಲಿ, ಒಂದು ಕಾಲದಲ್ಲಿ ಜನರ ಬದುಕಿನ ಭಾಗವಾಗಿದ್ದ ಮೈಶುಗರ್‌ನ ಭವಿಷ್ಯ ಏನಾಗಲಿದೆಯೋ ಎಂಬ ಆತಂಕವಂತೂ ಎಲ್ಲರಿಗೂ ಇದೆ.

 

ಎಚ್‌.ಶಿವರಾಜು

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.