ಪುತ್ರ ಪ್ರಜ್ವಲ್ ಗೆಲುವಿಗೆ ರೇವಣ್ಣ ನಾನಾ ವೇಷ!
Team Udayavani, Mar 19, 2019, 5:04 AM IST
ಹಾಸನ: ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್ ನನ್ನು ಗೆಲ್ಲಿಸಲು ಶತಪ್ರಯತ್ನ ಪ್ರಾರಂಭಿಸಿರುವಂತೆ ಇತ್ತ ಅವರ ಸಹೋದರ ರೇವಣ್ಣ ತಾನೇನು ಕಮ್ಮಿ ಎನ್ನುವಂತೆ ತಮ್ಮ ಪುತ್ರ ಪ್ರಜ್ವಲ್ ನನ್ನು ಸಂಸತ್ ಗೆ ಕಳುಹಿಸಲೇಬೇಕೆಂದು ಪಣ ತೊಟ್ಟಿರುವಂತಿದೆ.
ಹಾಸನದಲ್ಲಿ ಮೊನ್ನೆ ತಾನೆ ಭರ್ಜರಿಯಾಗಿ ಪ್ರಚಾರ ಪ್ರಾರಂಭಿಸಿರುವ ಪ್ರಜ್ವಲ್ ರೇವಣ್ಣ ಸ್ಥಳೀಯ ವಿಪಕ್ಷ ನಾಯಕರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಸಚಿವ ರೇವಣ್ಣ ಅವರು ಕುಟುಂಬ ಸಹಿತ ತಮ್ಮ ಬದ್ಧ ರಾಜಕೀಯ ವಿರೋಧಿಯ ಮನೆಗೆ ತೆರಳಿ ತಮ್ಮ ಪುತ್ರನ ಗೆಲುವಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡಿರುವುದು ವಿಶೇಷವಾಗಿದೆ. ತಮ್ಮ ಬದ್ಧ ರಾಜಕೀಯ ಎದುರಾಳಿ ಕಾಂಗ್ರೆಸ್ ಮಾಜೀ ಶಾಸಕ ಪುಟ್ಟೇಗೌಡ ಅವರ ಮನೆಗೆ ಇಂದು ಬೆಳಿಗ್ಗೆ ತಮ್ಮ ಪುತ್ರ ಪ್ರಜ್ವಲ್, ಪತ್ನಿ ಭವಾನಿ ರೇವಣ್ಣ, ಶಾಸಕ ಸಿ.ಎನ್. ಬಾಲಕೃಷ್ಣ ಮತ್ತಿತರರ ಜೊತೆ ತೆರಳಿದ ಶಾಸಕ ರೇವಣ್ಣ ಅವರು ತಮ್ಮ ಪುತ್ರನ ಗೆಲುವಿಗೆ ನಿಮ್ಮ ಆಶೀರ್ವಾದ ಅಗತ್ಯವಿದೆ ಎಂದು ಕೇಳಿಕೊಂಡಿದ್ದಾರೆ. ‘ಕ್ಷೇತ್ರದ ಮತದಾರರ ಮನಸ್ಸನ್ನು ಗೆಲ್ಲುವಂತೆ ಕೆಲಸ ಮಾಡಿದರೆ ಅವರೇ ಆಶೀರ್ವಾದ ಮಾಡುತ್ತಾರೆ’ ಎಂದು ಪುಟ್ಟೇಗೌಡ ಅವರು ಪ್ರಜ್ವಲ್ ಗೆ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದಾರೆ ಎಂದೂ ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಪ್ರಜ್ವಲ್ ರೇವಣ್ಣ ಅವರು ಹಾಸನ ಗ್ರಾಮಾಂತರ ಬಿ.ಜೆ.ಪಿ. ಅಧ್ಯಕ್ಷ ಅಗಿಲೆ ಯೋಗೀಶ್ ಅವರ ಮನೆಗೇ ತೆರಳಿ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಬಾರಿಯ ಲೋಕ ಸಮರವನ್ನು ಸವಾಲಾಗಿ ಸ್ವೀಕರಿಸಿರುವ ಗೌಡರ ಕುಟುಂಬವು ತಮ್ಮ ಇಬ್ಬರು ಯುವ ನಾಯಕರಿಗೆ ರಾಜಕಾರಣದಲ್ಲಿ ಗಟ್ಟಿ ಸ್ಥಾನವನ್ನು ನಿರ್ಮಿಸಿಕೊಡಲು ಹರಸಾಹಸಪಡುತ್ತಿರುವುದಂತೂ ಸ್ಪಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ