ಮಂಗಳೂರು: ಬಸ್ಸು ಮಾಲಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ
Team Udayavani, Nov 28, 2019, 12:27 PM IST
ಮಂಗಳೂರು: ಹರೇಕಳ ಗ್ರಾಮಕ್ಕೆ ಸರಕಾರಿ ಬಸ್ಸುಗಳಿಗಾಗಿ ಬೇಡಿಕೆ ಸಲ್ಲಿಸಿ ಹಲವು ವರ್ಷಗಳಾದರೂ ಸರಕಾರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಗುರುವಾರ ಪಂಚಾಯತ್ ಸದಸ್ಯರು ಖಾಸಗಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜ, ನಾಲ್ಕೈದು ವರ್ಷಗಳಿಂದ ಆರ್.ಟಿ.ಓ. ಅಧಿಕಾರಿ ಬರುತ್ತಿಲ್ಲ. ಬಸ್ ಇಲ್ಲದ ಕಾರಣ ಸರಕಾರಿ ಶಾಲೆಗೆ ಮಕ್ಕಳು ಕಡಿಮೆಯಾಗಿದ್ದಾರೆ ಎನ್ನುವ ದೂರು ಬಂದಿದೆ. ಗ್ರಾಮಸಭೆಗೆ ಬರಲು ಆಗುವುದಿಲ್ಲ, ಯಾವೆಲ್ಲಾ ಬಸ್ಸುಗಳಿಗೆ ಪರವಾನಿಗೆ ಇದೆ ಬರೆದು ಕೊಡಿ ಎಂದು ನಮ್ಮಲ್ಲೇ ಕೇಳುತ್ತಾರೆ. ಬಸ್ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸ್ ಇಲಾಖೆಗೆ ಬಸ್ ನಿಲ್ಲಿಸಲು ಮನವಿ ಮಾಡಿದರೆ ಅನುಮತಿ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ ಮಾತನಾಡಿ, ಕಳೆದ ನಾಲ್ಕೂವರೆ ವರ್ಷಗಳಿಂದ ಸರ್ಕಾರಿ ಬಸ್ಸಿಗೆ ಮನವಿ ಸಲ್ಲಿಸಲಾಗುತ್ತಿದೆ. ಜಿಲ್ಲಾಧಿಕಾರಿ, ಆರ್ ಟಿಓಗೆ ಮನವಿ ಮಾಡಿದ್ದೇವೆ. ಮೂರು ತಿಂಗಳಿಗೊಮ್ಮೆ ಆರ್ ಟಿಓ ಬದಲಾಗುತ್ತಿದ್ದಾರೆ. ಬಸ್ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಅಧಿಕಾರಿಗಳು ನಮ್ಮನ್ನು ಮಂಗಗಳಂತೆ ಅಲೆದಾಡಿಸುತ್ತಾರೆ. ನಾಲ್ಕು ವರ್ಷಗಳಿಂದ ಸರಿಯಾಗಿ ಗ್ರಾಮಸಭೆಯೂ ನಡೆಯುತ್ತಿಲ್ಲ ಎಂದು ತಿಳಿಸಿದರು.
ಸದಸ್ಯ ಬಶೀರ್ ಉಂಬುದ ಮಾತನಾಡಿ, ಮಂಗಳೂರಿಂದ ಹರೇಕಳಕ್ಕೆ ಮೂವತ್ತು ಕಿ.ಮೀ. ದೂರವಿದ್ದು, ಬಸ್ಸಿನ ಅವ್ಯವಸ್ಥೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಮನವಿಗೆ ಸ್ಪಂದಿಸದೆ, ಬಸ್ ಮಾಲೀಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಗ್ರಾಮಸಭೆಗೆ ಬರಲು ಆಗುವುದಿಲ್ಲ, 2020ಕ್ಕೆ ನಮ್ಮ ಸಭೆ ಇದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಇಂದು ಸ್ಪಷ್ಟ ಉತ್ತರ ಸಿಗದಿದ್ದರೆ ಮುಂದಕ್ಕೆ ಗ್ರಾಮಸ್ಥರನ್ನು ಸೇರಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಮಹಮ್ಮದ್ ಸಾಲಿ, ಮಹಮ್ನದ್ ಅಶ್ರಫ್, ಬದ್ರುದ್ದೀನ್, ಸತ್ತಾರ್, ಬಶೀರ್, ಮಜೀದ್ ಎಂ.ಪಿ, ಶಿವರಾಮ ಶೆಟ್ಟಿ, ಕಲ್ಯಾಣಿ, ಸಾರ್ವಜನಿಕರಾದ ಮಜೀದ್, ವಿಶ್ವನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ