ಮಂಗಳೂರು ಮನೆ ಕಳ್ಳತನ ಪ್ರಕರಣ: ಏಳು ಮಂದಿಯ ಬಂಧನ
Team Udayavani, Dec 5, 2019, 5:29 PM IST
ಮಂಗಳೂರು: ಮಂಗಳೂರು ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆಯಲ್ಲಿರುವ ಅನೀತಾ ಎನ್. ಶೆಟ್ಟಿಯವರ ಮನೆಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ಮಂಗಳೂರು ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆ ಪಕ್ಕದಲ್ಲಿರುವ ಅಪಾರ್ಟ್ಮೆಂಟಿನ ಅನೀತಾ ಎನ್. ಶೆಟ್ಟಿ ಎಂಬವರ ಪ್ಲಾಟಿನಲ್ಲಿ ಕಳ್ಳತನವಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಂಗಳೂರು ಕದ್ರಿ ಶಿವಭಾಗ್ ನ ರಾಕೇಶ್ ಬೋನಿಪಾಸ್ ಡಿ” ಸೋಜಾ (37 ವರ್ಷ), ಗೋವಾ ಮಾಡಗಾಂವ್ ನ ಅಶೋಕ್ ಬಂಡ್ರಗಾರ್ (36 ವರ್ಷ), ಗಣೇಶ್ ಬಾಪು ಪರಾಬ್ (37 ವರ್ಷ), ಮಂಗಳೂರು ಬೆಂದೂರ್ ವೆಲ್ ನ ಶಾಹೀರ್ ಮೊಹಮ್ಮದ್ (43 ವರ್ಷ), ಮಂಗಳೂರು ಕೊಲ್ಯ ಜನಾರ್ಧನ ಆಚಾರ್ಯ (41 ವರ್ಷ), ಮಂಗಳೂರು ಮಂಗಳಾ ನಗರ, ಮಂಗಳಾದೇವಿಯ ಚಂದನ್ ಆಚಾರ್ಯ (44 ವರ್ಷ), ಮಂಗಳೂರು ಕೊಟೆಕಾರ್ ನ ಪುರುಷೊತ್ತಮ್ ಆಚಾರ್ಯ (46 ವರ್ಷ) ರವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸುಮಾರು ಅಂದಾಜು 34 ಲಕ್ಷ ರೂ ಮೊತ್ತದ ಚಿನ್ನ ಹಾಗೂ ವಜ್ರ, ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೊ ಕಾರ್, 1 ಹುಂಡೈ ಕಾರ್, ಮೋಟಾರ್ ಸೈಕಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಂಗಳೂರು ಪೋಲಿಸ್ ಆಯುಕ್ತ ಪಿ.ಎಸ್.ಹರ್ಷ ನೇತೃತ್ವದಲ್ಲಿ ನಡೆದ ಈ ಕಾರ್ಯಚರಣೆಯಲ್ಲಿ ಡಿಸಿಪಿಗಳಾದ ಶ್ರೀಮಘ ಅರುಣಾಂಗ್ಸುಗಿರಿ, ಲಕ್ಷ್ಮಿ ಗಣೇಶ್, ಎಸಿಪಿ ಜಗದೀಶ್ ನಾಯಕ್ ,ಇನ್ಸ್ ಪೆಕ್ಟರ್ ಶಾಂತಾರಾಮ, ಕಾಂತಾರಾಜು, ಎಸ್ ಐ ಪ್ರದೀಪ್, ಮಾರುತಿ, ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ