ಡಿಸಿ ರೋಹಿಣಿ ಸಿಂಧೂರಿ ಅವರದ್ದು ಇಬ್ಬಗೆಯ ನೀತಿ: ಮಾಜಿ ಸಚಿವ ಮಂಜು ಮತ್ತೊಂದು ಆರೋಪ
Team Udayavani, Jun 5, 2021, 2:53 PM IST
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಾಣ, ಆಯುಕ್ತರೊಂದಿಗೆ ಜಗಳದ ವಿಚಾರಗಳು ಸುದ್ದಿಯಲ್ಲಿರುವಾಗಲೇ ಮಾಜಿ ಸಚಿವ ಎ.ಮಂಜು ಮತ್ತೊಂದು ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎ.ಮಂಜು, ಜಿಲ್ಲಾಧಿಕಾರಿಗಳಿಗೆ ಒಂದು ನಿಯಮ, ಸಾಮಾನ್ಯ ಜನರಿಗೊಂದು ನಿಯಮ. ಸಾಮಾನ್ಯ ಜನರ ಮಕ್ಕಳಿಗೆ ಆನ್ ಲೈನ್ ಶಿಕ್ಷಣ, ಆದರೆ ಜಿಲ್ಲಾಧಿಕಾರಿಯವರ ಮಕ್ಕಳಿಗೆ 20ಕ್ಕೂ ಹೆಚ್ಚು ಶಿಕ್ಷಕರಿಂದ ಶಿಕ್ಷಣ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ವಿಜಯೇಂದ್ರ ಹೈಕಮಾಂಡ್ ಭೇಟಿ ಮಾಡಲು ಇಡಿ ತನಿಖೆ ಭಯ ಕಾರಣ: ಯತ್ನಾಳ್
ರೋಹಿಣಿ ಸಿಂಧೂರಿ ಅವರ ಈ ಬಗೆಯ ಇಬ್ಬಗೆಯ ನೀತಿ ಕೇಳೋರು ಯಾರು ಎಂದು ಮಾಜಿ ಸಚಿವ ಎ. ಮಂಜು ಹೊಸ ಆರೋಪ ಮಾಡಿದರು.
ದನ ಕಾಯುವವನು ಐಎಎಸ್ ಮಾಡುತ್ತಾನೆ: ಈಗ ಧನ ಕಾಯುವವನು ಕೂಡಾ ಅಡ್ಜೆಸ್ಟ್ ಮೆಂಟ್ ನಲ್ಲೂ ಐಎಎಸ್ ಮಾಡುತ್ತಾನೆ. ಐಎಎಸ್ ಮಾಡಿದ ಮೇಲೆ ಅಧಿಕಾರ ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಆದರೆ ಜನರ ಸೇವೆ ಹೇಗೆ ಮಾಡುತ್ತೇವೆ ಎನ್ನುವುದೇ ಮುಖ್ಯ ಎಂದು ಡಿಸಿ ವಿರುದ್ದ ಕಿಡಿಕಾರಿದರು.
ಮೈಸೂರು ಮಹಾರಾಜರೇ ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಸರ್ಕಾರಿ ಸ್ಥಳದಲ್ಲಿ ಈ ಸಮಯದಲ್ಲಿ ಈಜುಕೊಳ ಬೇಕಿತ್ತೇ? ಸರ್ಕಾರಿ ಅಧಿಕಾರಿ ಒಂದೇ ಕಡೆ ಇರುತ್ತಾರಾ? ಐದು ವರ್ಷ ಆದ ಮೇಲೆ ವರ್ಗಾವಣೆಯಾಗುತ್ತಾರೆ. ಇದು ಗುತ್ತಿಗೆ ಕಂಟ್ರಾಕ್ಟರ್ ಗೋಸ್ಕರ ಮಾಡಿರುವ ಕೆಲಸ ಅಷ್ಟೇ ಎಂದು ಮಂಜು ಆರೋಪಿಸಿದರು.
ಇದನ್ನೂ ಓದಿ: ರೋಹಿಣಿಗೆ ನನ್ನ ಅವಧಿಯಲ್ಲಿ ಕೆಲಸ ಮಾಡುವಾಗ ತಪ್ಪುಗಳನ್ನ ತಿದ್ದಿ ತಿಳಿ ಹೇಳಿದ್ದೆ : ಎ ಮಂಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು