ಬೆಳ್ಳಿ ಆಸೆಗೆ ಮಾಲಿಕನ ಕೊಲೆ: ಆರೋಪಿ ಸೆರೆ
Team Udayavani, May 10, 2022, 5:48 PM IST
ಮೈಸೂರು: ಬೆಳ್ಳಿ ಆಸೆಗಾಗಿ ಕೆಲಸ ಕೊಟ್ಟವನನ್ನೇ ಹತ್ಯೆ ಮಾಡಿ ತಲೆನರೆಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ಅರ್ಜುನ್ ಕುಮಾರ್(28) ಬಂಧಿತ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕೊಲೆ ಮಾಡಿ ದೋಚಿದ್ದ 8 ಲಕ್ಷ ರೂ. ಮೌಲ್ಯದ 12 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ತನಗೆ ಕೆಲಸ ಕೊಟ್ಟಿದ್ದ ಗೋವಿಂದ ಕುಮಾರ್(30) ಎಂಬುವರನ್ನು ಅರ್ಜುನ್ ಕುಮಾರ್ ಕೊಲೆ ಮಾಡಿ ಬೆಳ್ಳಿ ಪದಾರ್ಥದೊಂದಿಗೆ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ. ತಕ್ಷಣ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಪಿ.ಪಿ.ಸಂತೋಷ್ ನೇತೃತ್ವದ ತಂಡ, ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ರಾಜಸ್ಥಾನ ಮೂಲದ ಗೋವಿಂದ ಕುಮಾರ್ ಅವರನ್ನು ನಗರದ ಸುಮತಿನಾಥ ಜೈನ ಮಂದಿರದ ಗೋಪುರಕ್ಕೆ ಬೆಳ್ಳಿಯಿಂದ ಪ್ರಭಾವಳಿ ನಿರ್ಮಿಸಲು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಕರೆಯಿಸಿದ್ದರು. 14 ಕೆಜಿ ಬೆಳ್ಳಿ ಗಟ್ಟಿಯನ್ನು ನೀಡಲಾಗಿತ್ತು. ಈ ಕೆಲಸಕ್ಕಾಗಿ ಗೋವಿಂದ ಕುಮಾರ್ ತಮ್ಮೂರಿನ ಅರ್ಜುನ್ ಕುಮಾರ್ ಅವರನ್ನು ಕರೆಯಿಸಿಕೊಂಡು ಹಳ್ಳದಕೇರಿಯಲ್ಲಿನ ಮನೆಯಲ್ಲಿ ತಂಗಿದ್ದರು. ಮನೆಯಲ್ಲಿದ್ದ ಬೆಳ್ಳಿ ಪದಾರ್ಥವನ್ನು ಲಪಟಾಯಿಸುವ ಉದ್ದೇಶ ಹೊಂದಿದ್ದ ಅರ್ಜುನ್ ಕುಮಾರ್ ಕಳೆದ ಏಪ್ರಿಲ್ 27 ರಂದು ಕೋಣೆಯಲ್ಲಿ ಮಲಗಿದ್ದ ಗೋವಿಂದ ಕುಮಾರ್ ನನ್ನು ಮರದ ಪಟ್ಟಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ ಎಂಬುದನ್ನು ಬಿಂಬಿಲಿಸಲು, ಕೋಣೆಯ ಸೀಲಿಂಗ್ ಫ್ಯಾನ್ ತಲೆಯ ಮೇಲೆ ಇಟ್ಟು, ಫ್ಯಾನ್ ಬಿದ್ದಿದ್ದರಿಂದ ಗೋವಿಂದ ಕುಮಾರ್ ಮೃತಪಟ್ಟಿದ್ದಾರೆ ಎಂದು ನಂಬಿಸಿ, ಬೆಳ್ಳಿಯ ಗಟ್ಟಿಯೊಂದಿಗೆ ಅರ್ಜುನ್ ಕುಮಾರ್, ಪರಾರಿಯಾಗಿದ್ದಾನೆ.
ಒಂದು ದಿನದ ಬಳಿಕ ಗೋವಿಂದ ಕುಮಾರ್ ಮೃತಪಟ್ಟಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಘಟನೆಯ ಬಗ್ಗೆ ಅನುಮಾನಗೊಂಡು ಅರ್ಜುನ್ ಕುರ್ಮಾ ಹುಡುಕಿಕೊಂಡು ರಾಜಸ್ಥಾನಕ್ಕೆ ತೆರಳಿದಾಗ, ಮನೆಯಲ್ಲಿ ಬೆಳ್ಳಿ ಗಟ್ಟಿ ಇರುವುದು ಗೊತ್ತಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿ, ಅರ್ಜುನ್ ಕುಮಾರ್ನನ್ನು ಬಂಧಿಸಿದ್ದಾರೆ. ಬಳಿಕ ಮೈಸೂರಿಗೆ ಕರೆ ತಂದು ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್