ಬಯಲು ಸೀಮೆಯಲ್ಲಿ ಕಾಫಿ ಬೆಳೆದು ರೈತ ಯಶಸ್ಸು


Team Udayavani, Apr 20, 2019, 12:01 PM IST

10

ಶ್ರೀರಂಗಪಟ್ಟಣ: ಕೊಡಗಿನಂತಹ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯ ಬಹುದಾದ ಕಾಫಿ ಬೆಳೆಯನ್ನು ಕಡಿಮೆ ಮಳೆ ಬೀಳುವ ಪ್ರದೇಶವಾದ ಮಂಡ್ಯದ ಬಯಲು ಸೀಮೆಯಲ್ಲಿ ರೈತರೊಬ್ಬರು ಯಶಸ್ವಿಯಾಗಿ ಬೆಳೆದಿದ್ದಾರೆ.

ತಾಲೂಕಿನ ಪಾಲಹಳ್ಳಿ ಗ್ರಾಮದ ರೈತ ಸಿ.ದೇವರಾಜು ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದಾರೆ. ರೊಬಸ್ಟಾ ಮತ್ತು ಅರೇಬಿಕಾ-ಎರಡೂ ತಳಿಯ 1300ಕ್ಕೂ ಹೆಚ್ಚು ಗಿಡಗಳನ್ನು ಇವರು ಬೆಳೆದಿದ್ದು ಮೊದಲ ಕೊಯ್ಲು ಕಾಫಿ ಬೀಜ ತೆಗೆದ ಖುಷಿಯಲ್ಲಿದ್ದಾರೆ. ತಾವು ಬೆಳೆದ ಮೊದಲ ಫ‌ಸಲು 4 ಮೂಟೆ ಕಾಫಿ ಬೀಜಗಳನ್ನು ದೇವರಾಜು ಕುಶಾಲನಗರದಲ್ಲಿ ಮಾರಾಟ ಮಾಡಿ ಹಣ ಎಣಿಸಿಕೊಂಡಿದ್ದಾರೆ.

ಕಪ್ಪು- ಕೆಂಪು ಮಿಶ್ರಿತ ಮಣ್ಣಿನ ತಮ್ಮ ಜಮೀನಿನಲ್ಲಿ 3 ವರ್ಷಗಳ ಹಿಂದೆ ಕಾಫಿ ಗಿಡಗಳನ್ನು ನೆಟ್ಟಿದ್ದು ಎಲ್ಲಾ ಗಿಡಗಳು ಹುಲುಸಾಗಿ ಬೆಳೆದಿವೆ. ಕಾಫಿ ಅಗತ್ಯವಾದ ನೆರಳು, ತೇವಾಂಶ ಸೃಷ್ಟಿಸಿ ತಮ್ಮ ಪ್ರಯೋ ಗದಲ್ಲಿ ಯಶಸ್ಸು ಕಂಡಿದ್ದಾರೆ. ಸುಲಭ ವಾದ ಹಾಯಿ ನೀರು ಪದ್ಧತಿಯಲ್ಲಿಯೇ ಕಾಫಿ ಕೃಷಿ ನಡೆಯುತ್ತಿರುವುದು ಇಲ್ಲಿನ ವಿಶೇಷ.

ಬಹು ಬೆಳೆ ಪದ್ಧತಿ: ದೇವರಾಜು ಅವರ ಕಾಫಿ ತೋಟದ ನಡುವೆ ಹತ್ತಕ್ಕೂ ಹೆಚ್ಚು ಬಗೆಯ ತೋಟಗಾರಿಕಾ ಬೆಳೆಗಳಿವೆೆ. 300 ಪಚ್ಚಬಾಳೆ, 100 ಅಡಕೆ, 60 ಸಪೋಟ (ಚಿಕ್ಕು), 60 ತೆಂಗು, 100 ಪಪ್ಪಾಯ, 50 ಏಲಕ್ಕಿ ಬಾಳೆ, 50 ಕಾಳು ಮೆಣಸು, 10 ಸೀಬೆ (ಪೇರಲ), 10 ನಿಂಬೆ, 10 ಕಿತ್ತಳೆ, 6 ಬಟರ್‌ ಫ‌್ರೂಟ್, ಎರಡು ಮಾವು, ಎರಡು ದಾಳಿಂಬೆ ಹಾಗೂ ಏಲಕ್ಕಿ ಗಿಡಗಳಿವೆ. ಈ ಪೈಕಿ ಅಡಕೆ, ತೆಂಗು, ಸಪೋಟ, ಕಾಳು ಮೆಣಸು, ಪಪ್ಪಾಯ, ಮಾವು ಫ‌ಲ ಕೊಡುತ್ತಿವೆ. 100 ತೇಗ, 60 ಸಿಲ್ವರ್‌ ಮರಗಳು ಇಲ್ಲಿ ಬೆಳೆಯುತ್ತಿವೆ.

ವರ್ಷಕ್ಕೆ ಲಕ್ಷ ರೂ.: ದೇವರಾಜು ಅವರ ತೋಟದಲ್ಲಿ ಕಾಫಿ ಪ್ರಧಾನ ಬೆಳೆ. ಮೊದಲ ಫ‌ಸಲಿನಿಂದ 15 ಸಾವಿರ ರೂ.,ಆದಾಯ ಸಿಕ್ಕಿದೆ. ತೆಂಗಿನ ಕಾಯಿ, ಎಳನೀರಿನಿಂದ ವರ್ಷಕ್ಕೆ 60 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಸಪೋಟ ಗಿಡಗಳನ್ನು ವರ್ಷಕ್ಕೆ 30 ಸಾವಿರಕ್ಕೆ ಗುತ್ತಿಗೆ ನೀಡಿದ್ದಾರೆ. ರೆಡ್‌ ಲೇಡಿ ತಳಿ ಪಪ್ಪಾಯ ಗಿಡಗಳು ಇದುವರೆಗೆ 20 ಸಾವಿರ ರೂ.ಹಣ ತಂದು ಕೊಟ್ಟಿವೆ. ಅಡಕೆ ಮತ್ತು ಅವುಗಳಿಗೆ ಹಬ್ಬಿರುವ ಕಾಳು ಮೆಣಸು ಬಳ್ಳಿಗಳು ಗೊಂಚಲಾಗಿ ಫ‌ಲ ನೀಡಲಾರಂಭಿಸಿವೆ.

ಸ್ಪ್ರಿಂಕ್ಲರ್‌ ನೀರು: ‘ಮರಗಳ ನೆರಳು ಮತ್ತು ತೇವಾಂಶ ಭರಿತ ವಾತಾವರಣ ಇದ್ದರೆ ಬಯಲು ಸೀಮೆಯಲ್ಲಿಯೂ ಕಾಫಿ ಬೆಳೆಯಬಹುದು. ನಿಗದಿತ ಪ್ರಮಾಣದಲ್ಲಿ ನೀರು ಮತ್ತು ಗೊಬ್ಬರ ಕೊಟ್ಟರೆ ಮಣ್ಣು ಮೃಧುವಾಗುವ ಜತೆಗೆ ವಾತಾವರಣದಲ್ಲಿ ಆದ್ರರ್ತೆ ತನ್ನಿಂತಾನೆ ಸೃಷ್ಟಿಯಾಗುತ್ತದೆ. ಸ್ಪ್ರಿಂಕ್ಲರ್‌ ಪದ್ಧತಿ ನೀರಿನ ವ್ಯವಸ್ಥೆ ಕಾಫಿ ಬೆಳೆಗೆ ಹೆಚ್ಚು ಸೂಕ್ತ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರು.

‘ಕಾಫಿ ಗಿಡಗಳನ್ನು ನಾಟಿ ಮಾಡಿದ ಆರಂಭದ ದಿನಗಳಲ್ಲಿ ಬೆಳೆ ಬರುತ್ತ ದೆಯೋ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಸದ್ಯ ಕಾಫಿ ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದು, ರೋಗಭಾದೆ ಯಿಂದ ಮುಕ್ತವಾಗಿವೆ. ಸದ್ಯಕ್ಕೆ 2-3 ಮೂಟೆ ಕಾಫಿ ಬೀಜ ಸಿಗುತ್ತಿದ್ದು, ಹಂತ ಹಂತವಾಗಿ ಇಳುವರಿ ಹೆಚ್ಚಲಿದೆ. ಇರುವ ಎಲ್ಲಾ ಬೆಳೆಯಿಂದ ವರ್ಷಕ್ಕೆ 1 ಲಕ್ಷ ರೂ., ಆದಾಯ ಬರುತ್ತಿದೆ. ಇನ್ನು 10 ವರ್ಷ ಕಳೆದರೆ ತೇಗ ಮತ್ತು ಸಿಲ್ವರ್‌ ಓಕ್‌ ಮರಗಳಿಂದಲೇ 20 ಲಕ್ಷ ರೂ. ಸಿಗಲಿದೆ’ ಎಂದು ದೇವರಾಜು ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಮಾಹಿತಿಗೆ ಮೊ.99643 64350ಕ್ಕೆ ಸಂಪರ್ಕಿಸಬಹುದಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.