ಕಾರ್ಯಕರ್ತರು ಮೈಮರೆಯದಿದ್ದರೆ ಅಧಿಕಾರ ನಮ್ಮದೇ : ಕೆ.ವೆಂಕಟೇಶ್


Team Udayavani, Jan 2, 2022, 5:53 PM IST

ಕಾರ್ಯಕರ್ತರು ಮೈಮರೆಯದಿದ್ದರೆ ಅಧಿಕಾರ ನಮ್ಮದೇ : ಕೆ.ವೆಂಕಟೇಶ್

ಪಿರಿಯಾಪಟ್ಟಣ: ಕಾಂಗ್ರೆಸ್ ಕಾರ್ಯಕರ್ತರು ಮೈಮರೆಯದೆ ಒಗ್ಗಟ್ಟಿನಿಂದ ದುಡಿದಲ್ಲಿ ಯಶಸ್ಸು ಖಂಡಿತ ದೊರಕಲಿದೆ ಎಂಬುದಕ್ಕೆ ರಾಜ್ಯ ಹಾಗೂ ತಾಲ್ಲೂಕಿನ ಗ್ರಾ.ಪಂ.ಉಪ ಚುನಾವಣೆಗಳೇ ಸಾಕ್ಷಿ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಇತ್ತಿಚೆಗೆ ಗ್ರಾ.ಪಂ.ಉಪ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ 71 ಸಾವಿರಷ್ಟು ಮತಗಳು ಬಂದಿವೆ ಕಾರ್ಯಕರ್ತರು ಮೈ ಮರೆತದ್ದರಿಂದಲೆ ನಮಗೆ ಸೋಲು ಉಂಟಾಗಿದೆ. ಈಗ ಕಾರ್ಯಕರ್ತರಿಗೆ ಈ ಪರಿಸ್ಥಿತಿ ಅರ್ಥವಾಗಿದೆ, ಅನೇಕ ಕಡೆಗಳಲ್ಲಿ ಸೋಲು ಕಂಡ ಸ್ಥಳದಲ್ಲಿಯೆ ಮತ್ತೆ ಕಾಂಗ್ರೆಸ್ಗೆ ಜಯದೊರಕಿದೆ ಅಲ್ಲದೆ ತಾಲೂಕಿನಲ್ಲಿ ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದಕ್ಕೆ ವಿಧಾನಪರಿಷತ್ತು ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳೆ ಕಾಂಗ್ರೆಸ್ ನ ಜಯಭೇರಿ ಸಾಕ್ಷಿಯಾಗಿವೆ. ಗ್ರಾ.ಪಂ.ಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಅವಕಾಶ ಇದ್ದು ಸಿದ್ದತೆ ಮಾಡಿಕೊಳ್ಳಿ. ವೈಯುಕ್ತಿ ಪ್ರತಿಷ್ಟೆ, ಪರಸ್ಪರ ವೈಮನಸ್ಸುಗಳನ್ನು ಬಿಟ್ಟು ಒಂದಾಗಿ ಪಕ್ಷಕ್ಕಾಗಿ ದುಡಿದಾಗ ಮಾತ್ರ ಮತ್ತೆ ತಾಲೂಕಿನಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

 ಪಕ್ಷಕ್ಕೆ ಸ್ವಾಗತಿಸಿ:

ಪಕ್ಷಕ್ಕೆ ಒಳ್ಳಯೆದಾಗುವುದಾದರೆ ಯಾರನ್ನು ಬೇಕಾದರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಯಾರು ನನ್ನ ಕಷ್ಟದಲ್ಲಿ ನೋವಿನಲ್ಲಿ ಜೋತೆಗಿದ್ಧಾರೆ ಎಂಬ ಅರಿವು ನನಗಿದೆ ಹೊಸಬರು ಪಕ್ಷಕ್ಕೆ ಬಂದಾಕ್ಷಣ ಹಳಬರಿಗೆ ತೊಂದರೆಯಾಗುತ್ತದೆ ಎಂಬ ಮನೋಭಾವ ನಿಮಗೆ ಬೇಡ ಪಕ್ಷದ ಸಂಘಟನೆ ಬಯಸಿ ಬರುವರಿಗೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಅವರನ್ನು ನಮ್ಮೊಂದಿಗೆ ಗೌರವಿಸಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾದ ಬೆಟ್ಟದಪುರ ಗ್ರಾ.ಪಂ. ಸದಸ್ಯರಾದ ಶಿಲ್ಪಪ್ರಶಾಂತ್, ಹಡಗನಹಳ್ಳಿ ಗ್ರಾ.ಪಂ.ನ ರಾಜನಬೆಳಗುಲಿ ಗ್ರಾಮದ ಆರ್.ಟಿ.ವೆಂಕಟೇಶ್, ಕೊಪ್ಪ ಗ್ರಾಮ ಪಂಚಾಯಿತಿಯ ಕೆ.ಎ.ಕೃಷ್ಣ (ಸುನಿಲ್) ರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ಜಾನ್ಬಾಬು, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಅನಿತಾತೋಟಪ್ಪಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮುತ್ತುರಾಣಿ, ಸರಸ್ವತಿ, ಪುರಸಭಾ ಸದಸ್ಯರಾದ ಮಂಜು, ರವಿ, ಮಾಜಿ ತಾ.ಪಂ.ಸದಸ್ಯ ಐಲಾಪುರ ರಾಮು, ಎಸ್ಸಿಘಟಕದ ಅಧ್ಯಕ್ಷ ಪಿ.ಮಹದೇವ್, ಕಿರನಲ್ಲಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್, ಗ್ರಾ.ಪಂ.ಸದಸ್ಯರಾದ ಮಾಲಂಗಿ ಹರೀಶ್, ಅಕ್ಕಯ್ಯಮ್ಮ, ಮುಖಂಡರಾದ ಪುಟ್ಟರಾಜು, ಭೀಮ, ಸಂತೋಷ್, ರಾಜೇಶ್, ಜೆ.ಮೋಹನ್, ಮುರುಳೀಧರ್, ಮಹೇಂದ್ರ ಕುಮಾರ್ ಮನುಗನಹಳ್ಳಿ ಮಣಿಕಂಠ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

20

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.