ನಾಗರಹೊಳೆ-ಹುಣಸೂರು ಮುಖ್ಯ ರಸ್ತೆಯಲ್ಲಿ ಗುಂಡಿಗೆ ಜಿಂಕೆ ಬಲಿ
ಹಾಡುಹಗಲೇ ದುಷ್ಕೃತ್ಯ; ಕಾಡಂಚಿನ ಭರತವಾಡಿ ಬಳಿ ಜಿಂಕೆ ಕಳೆಬರಹ ಪತ್ತೆ
Team Udayavani, Jun 17, 2022, 9:13 PM IST
ಸಾಂದರ್ಭಿಕವಾಗಿ ಜಿಂಕೆಯ ಚಿತ್ರ ಬಳಸಿಕೊಳ್ಳಲಾಗಿದೆ.
ಹುಣಸೂರು : ನಾಗರಹೊಳೆ ಮುಖ್ಯರಸ್ತೆ ಬದಿಯಲ್ಲಿ ಜಿಂಕೆಯೊಂದು ಗುಂಡೇಟಿಗೆ ಬಲಿಯಾಗಿರುವುದು ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.
ಹುಣಸೂರು-ನಾಗರಹೊಳೆ ಮುಖ್ಯ ರಸ್ತೆಯ ಭಾರತವಾಡಿ ಗೇಟ್ ಬಳಿಯ ಹೊಲದಲ್ಲಿ ದನಗಾಹಿಗಳಿಗೆ ಜಿಂಕೆ ಸತ್ತಿರುವುದು ಕಂಡುಬಂತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ವೀರನಹೊಸಹಳ್ಳಿ ವನ್ಯಜೀವಿ ವಲಯದ ಆರ್ ಎಫ್ಒ ನಮನ್ ನಾರಾಯಣ್ ನಾಯ್ಕ, ಡಿಆರ್ಎಫ್ಒ ವೀರಭದ್ರಯ್ಯ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆ ವೇಳೆ ಚರೆಗುಂಡುಗಳು ಸಿಕ್ಕಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಜಿಂಕೆಯು ಉದ್ಯಾನದಿಂದ ಹೊರಬಂದಿರುವ ವೇಳೆ ಭೇಟೆಗಾಗಿ ಗುಂಡಿಕ್ಕಿರಬಹುದೆಂದು ಶಂಕಿಸಲಾಗಿದ್ದು, ಈಗಾಗಲೇ ಅರಣ್ಯ ಸಂಚಾರಿ ದಳ, ಎಸ್ ಟಿಪಿಎಫ್ ತಂಡವು ಸಹ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಎಸಿಎಫ್ ಸತೀಶ್ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್