ಪ.ಜಾತಿ ಮತ್ತು ಪ.ವರ್ಗದ ರೈತರಿಗೆ ಉಚಿತವಾಗಿ ಸಾವಿರ ತೆಂಗಿನ ಸಸಿ ವಿತರಣೆ
Team Udayavani, Jul 19, 2022, 7:43 PM IST
ಹುಣಸೂರು: ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಹುಣಸೂರಿನ ಸುಬೋ ಸೇವಾಸಂಸ್ಥೆ ಸಹಯೋಗದಲ್ಲಿ ಪ.ಜಾತಿ ಮತ್ತು ಪ.ವರ್ಗದ ರೈತರಿಗೆ ಸಾವಿರ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಸುಬೋ ಸೇವಾಸಂಸ್ಥೆಯ ಮುಖ್ಯಸ್ಥ ಎಚ್.ಎಸ್.ವರದರಾಜು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರಿಗೆ ವಿತರಿಸಿರುವ ಸಸಿಗಳು ಸಂಶೋಧನಾ ಸಂಸ್ಥೆಯ ಹೊಸ ತಳಿಯಾಗಿದ್ದು ಜತನದಿಂದ ಬೆಳೆಸಿರೆಂದರು.
ಸಿಪಿಐಎಂ ಮುಖಂಡ ವಿ.ಬಸವರಾಜುಕಲ್ಕುಣಿಕೆ ಮಾತನಾಡಿ, ರೈತರಿಗೆ ಇದೊಂದು ಉಪಯುಕ್ತ ಕಾರ್ಯಕ್ರಮವೆಂದರು.
ಈ ವೇಳೆ ಆದಿಜಾಂಬವ ಸಂಘದ ಅಧ್ಯಕ್ಷ ಜೆ.ಮಹದೇವು, ದಲಿತ ಮುಖಂಡ ಕಾಂತರಾಜು, ಗಿರಿಜನ ಮಖಂಡ ವೈ.ಕೆ.ಸುರೇಶ್, ಗಂಗಾಧರ್, ಎಚ್.ವಿ.ಭೂಮಿಕಾ, ಮನು, ರತ್ನಮ್ಮ, ಉಮೇಶ್, ಸಿದ್ದಯ್ಯ, ಪ್ರಕಾಶ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್