ವಿವಿಧ ಬೇಡಿಕೆ ಈಡೇರಿಕೆಗೆ ರೈತರ ಜಾಥಾ
Team Udayavani, Sep 2, 2021, 9:48 PM IST
ಹುಣಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ(ಅರಳಾಪುರ ನಂಜೇಗೌಡ ಬಣ)ವತಿಯಿಂದ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ತಾಲೂಕು ಕಚೇರಿ ಎದುರು ನಡೆದ ಧರಣಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಅರಳಾಪುರನಂಜೇಗೌಡ, ತಾಲೂಕು ಅಧ್ಯಕ್ಷ ಮೋದೂರು ಮಹೇಶ್ ಮತ್ತಿತರರು ಮಾತನಾಡಿ, ತೈಲ, ಅನಿಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಕೂಡಲೇ ಬೆಲೆ ಇಳಿಸಬೇಕು. ತಂಬಾಕು ಬೆಳೆಗಾರರಿಗೆ ಅನಗತ್ಯವಾಗಿ ದಂಡ ವಿಧಿಸುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ತಹಶೀಲ್ದಾರ್ ಮೋಹನ್ ಕುಮಾರ್ಗೆ ಮನವಿಪತ್ರ ಸಲ್ಲಿಸಿದರು. ಶೀಘ್ರವೇ ತಂಬಾಕು ಮಂಡಳಿ ಅಧಿಕಾರಿಗಳ ಸಭೆ ನಡೆಸಲಾಗುವುದೆಂದು ತಹಶೀಲ್ದಾರ್ ಭರವಸೆ ನೀಡಿದರು.
ಜಾಥಾದಲ್ಲಿ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಶುಕೂರ್, ಸೈಯದ್ ಅಬ್ದುಲ್ಲಾ, ಮಂಜು, ರಾಮೇಗೌಡ, ಸುಕನ್ಯಾ ರಮೇಶ್, ಮಹಮದ್ಅಕ್ರಂ, ಹರವೆ ಶಾಂತಕುಮಾರ್, ಹೆಗ್ಗಂದೂರು ನಿಂಗರಾಜು, ಚಂದ್ರಿಕಾ, ರಫೀಕ್ ಇತರರಿದ್ದರು.
ಇದನ್ನೂ ಓದಿ:ತಮ್ಮ ಫೋಟೋ ಹಾಕಿ ‘RIP’ ಹೇಳಿದ್ದಕ್ಕೆ ನಟ ಸಿದ್ದಾರ್ಥ ಪ್ರತಿಕ್ರಿಯೆ ಏನು ?
ವಿವಿಧ ಬೇಡಿಕೆ:
ತಂಬಾಕಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು. ಅನಧಿಕೃತ ತಂಬಾಕು ಬೆಳೆಗಾರರಿಗೆ ವಿಧಿಸುವ ದಂಡವನ್ನು ಕೈ ಬಿಡಬೇಕು. ದಂಡದ ಹಣವನ್ನು ರೈತರ ಕಲ್ಯಾಣಕ್ಕೆ ಉಪಯೋಗಿಸಬೇಕು. ತಂಬಾಕು ರೈತರು ಸ್ವಯಂ ಪ್ರೇರಿತವಾಗಿ ಬೆಳೆಯನ್ನು ನಿಲ್ಲಿಸಿದರೆ ಪ್ರತಿ ಸಿಂಗಲ್ ಬ್ಯಾರನ್ಗೆ 5ಲಕ್ಷ ರೂ.ಪರಿಹಾರ ಕೊಡಬೇಕು. ಹುಣಸೂರಿನಲ್ಲಿ ಮೆಕ್ಕೆಜೋಳ ಮತ್ತು ಶುಂಠಿ ಖರೀದಿ ಕೇಂದ್ರ ತೆರೆಯಬೇಕು. ವಿದ್ಯುತ್ ಖಾಸಗೀಕರಣ ಮತ್ತು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ಕೈಬಿಡಬೇಕು. ಎಸ್ಬಿಐ ಬ್ಯಾಂಕಿನಂತೆ ಇತರೆ ಬ್ಯಾಂಕ್ಗಳಲ್ಲೂ ಒನ್ ಟೈಮ್ ಸೆಟಲ್ಮೆಂಟ್ ಕಾರ್ಯಕ್ರಮ ರೂಪಿಸಬೇಕು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಬೇಕು.