ಸೆಪ್ಟೆಂಬರ್ ಒಳಗೆ ವಿಷ್ಣು ಸ್ಮಾರಕ ಪೂರ್ಣ
Team Udayavani, Dec 31, 2021, 7:15 PM IST
ಮೈಸೂರು: ನಟ ಡಾ. ವಿಷ್ಣುವರ್ಧನ್ 12ನೇ ವರ್ಷದ ಸ್ಮರಣೆ ಅಂಗ ವಾಗಿ ಮೈಸೂರಿನ ಹೊರ ವಲಯದಲ್ಲಿರುವ ವಿಷ್ಣು ಸ್ಮಾರಕದ ಬಳಿ ಗುರುವಾರ ಪೂಜೆ, ಪುನಸ್ಕಾರ ನೆರ ವೇ ರಿ ತು. ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿರುವ ವಿಷ್ಣುವರ್ಧನ್ ಸ್ಮಾರಕ ಭೂಮಿಯಲ್ಲಿ ವಿಷ್ಣುವರ್ಧನ್ ಅವ ರ ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ ಸೇರಿದಂತೆ ಅಭಿಮಾನಿಗಳಿಂದ ಪೂಜೆ ನೆರ ವೇ ರಿತು.
ವಿಷ್ಣುವರ್ಧ ನ್ ಅವರ ಸ್ಮಾರಕ ಮುಂದಿನ ಸೆಪ್ಟೆಂಬರ್ ಒಳ ಗಾಗಿ ಪೂರ್ಣ ಗೊ ಳ್ಳ ಲಿದೆ. ಕಾಮಗಾರಿ ಕಾರ್ಯ ಈಗಾ ಗಲೇ ಆರಂಭ ವಾ ಗಿ ದೆ. ಇದಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ 700ಕ್ಕೂ ಅಧಿಕ ಫೋಟೋ ಬಳಸಿ ಗ್ಯಾಲರಿ ನಿರ್ಮಿಸ ಲಾ ಗು ವುದು.
ರಂಗ ಭೂಮಿ ಶಿಬಿ ರ ಗಳು ಇಲ್ಲಿ ನಡೆ ಯ ಲಿ ವೆ ಎಂದು ನಟ ಅನಿ ರುದ್ಧ ತಿಳಿ ಸಿ ದರು. ಇಂಡಿಯನ್ μಲಂ ಟೆಲಿವಿಷನ್ ಇನ್ಸ್ಟಿಟ್ಯೂಟ್ ಶಾಖೆ ಯನ್ನು ಇಲ್ಲಿ ಪ್ರಾರಂಭಿಸುವ ಚಿಂತನೆಯಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ. ಈಗ ಅದಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಅನಿ ರುದ್ಧ ತಿಳಿ ಸಿ ದ ರು.