ಗಾವಡಗೆರೆ ಸಂಘಕ್ಕೆ 30 ಲಕ್ಷ ರೂ. ಲಾಭ
Team Udayavani, Sep 29, 2019, 3:00 AM IST
ಹುಣಸೂರು: ತಾಲೂಕಿನ ಗಾವಡಗೆರೆ ರೈತ ಸೇವಾ ಸಹಕಾರ ಸಂಘ 2018-19ನೇ ಸಾಲಿನಲ್ಲಿ 178 ಕೋಟಿ ರೂ. ವಹಿವಾಟು ನಡೆಸಿದ್ದು, 30 ಲಕ್ಷ ರೂ.ಲಾಭಗಳಿಸಿದೆ ಸಂಘದ ಅಧ್ಯಕ್ಷ ಲೋಕನಾಥ್ ರಾವ್ ಕದಂ ತಿಳಿಸಿದರು.
ಗಾವಡಗೆರೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನಲ್ಲಿ 2,183 ರೈತರಿಗೆ ಬೆಳೆ ಸಾಲ, ತಂಬಾಕು ಸಾಲ, ಭೂ ಅಭಿವೃದ್ಧಿ ಸಾಲ, ದ್ವಿಚಕ್ರ ಸಾಲ, ಆಭರಣ ಸಾಲ ಸೇರಿದಂತೆ 15.51 ಕೋಟಿ ರೂ. ಸಾಲ ನೀಡಿದೆ. ಈ ಪೈಕಿ ಶೇ.96 ರಷ್ಟು ಮರುಪಾವತಿಯಾಗಿದೆ.
ಇನ್ನೂ 28 ಲಕ್ಷ ರೂ. ಸಾಲ ಬಾಕಿ ಬರಬೇಕಿದೆ. 2019-20ರಲ್ಲಿ 1,870 ರೈತರಿಗೆ 13.12 ಕೋಟಿ ರೂ.ಸಾಲ ವಿತರಿಸಲಾಗಿದೆ. 884 ರೈತರ 6.25 ಕೋಟಿ ರೂ. ಸಾಲಮನ್ನಾ ಆಗಿದೆ. ಸರ್ಕಾರದಿಂದ ಇನ್ನೂ ಸಾಲ ಮನ್ನಾ ಬಾಕಿ ಹಣ ಬಂದಿಲ್ಲ ಎಂದರು.
ಸಂಘದ ಸಿಇಒ ಆರ್.ಅಶೋಕ್ ಕುಮಾರ್, ಸಂಘವು 58 ನ್ಯಾಯ ಬೆಲೆ ಅಂಗಡಿಗಳಿಗೆ ಸಗಟು ಪಡಿತರ ವಿತರಿಸುತ್ತಿದ್ದು, ಇದರಿಂದ ಸಂಘಕ್ಕೆ 36.43 ಲಕ್ಷ ರೂ. ಆದಾಯ ಬಂದಿದೆ ಎಂದರು. ಸಭೆಯಲ್ಲಿ ಹಿರಿಯ ವ್ಯವಸ್ಥಾಪಕ ಸಂತೋಷ್ಕುಮಾರ್, ನಿರ್ದೇಶಕರಾದ ಹೊನ್ನಪ್ಪರಾವ್ ಕಾಳಿಂಗೆ, ಬಿ.ಎಂ.ತಾರಕೇಶ್ವರಿ, ಜಯಮ್ಮ, ಸಣ್ಣೇಗೌಡ, ಅಮರನಾಥ್, ಎಂ.ಶಿವಪ್ರಸಾದ್, ಜಯರಾಮೇಗೌಡ, ಲೆಕ್ಕಾಧಿಕಾರಿ ಎನ್.ಆನಂದ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ