ಸಂಸದರೇ ನಿಮ್ಮ ಸಾಧನೆ ಏನು? ಪ್ರತಾಪ ಸಿಂಹಗೆ ಶಾಸಕ ಎಚ್.ಪಿ.ಮಂಜುನಾಥ್ ಪ್ರಶ್ನೆ
Team Udayavani, Dec 4, 2020, 11:37 AM IST
ಹುಣಸೂರು: ಕಳೆದ ಹತ್ತು ತಿಂಗಳಿನಿಂದ ನಿಮ್ಮ ಬಿಜೆಪಿ ಸರಕಾರವೇ ಸತ್ತು ಕೂತಿದೆ. ಏನು ಮಾಡಿದ್ದೀರಾ ಎನ್ನುತ್ತಿದ್ದೀರಾ. ಸಂಸದರೆ ನಿಮ್ಮ ಸಾಧನೆ ಏನೆಂಬುದನ್ನು ಜನತೆ ಮುಂದಿಡಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅವರು ಸಂಸದ ಪ್ರತಾಪ್ ಸಿಂಹಗೆ ಸವಾಲೆಸೆದರು.
ಹುಣಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಕಿ ಮಾತನಾಡಿದ ಅವರು, ತಮ್ಮ ಹಾಗೂ ಜಿಲ್ಲಾಧಿಕಾರಿ ನಡುವಿನ ವಿವಾದವನ್ನು ಮಂತ್ರಿಗಳು ಮಧ್ಯ ಪ್ರವೇಶಿಸಿ ಸುಖ್ಯಾಂತ್ಯಗೊಳಿಸಿದ್ದಾರೆ. ಅದೇಕೋ ಮತ್ತೆ ಮಾಧ್ಯಮದ ಮುಂದೆ ಸಂಸದರು ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳು ಜನಸ್ಪಂದನ ನಡೆಸಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ ಎಂದಿದ್ದಾರೆ. ಇದರ ಮರ್ಮವೇನೆಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ಯಾವುದೇ ಸರಕಾರಿ ಕಾರ್ಯಕ್ರಮವನ್ನು ಜನಪ್ರತಿನಿಧಿಗಳ ಗಮನಕ್ಕೆ ಬಂದು ನಡೆಸುವುದು ಸಂಪ್ರದಾಯ. ಇದಕ್ಕೆ ವಿರುದ್ದವಾಗಿ ಸರಕಾರಿ ಯಂತ್ರ ನಡೆಸುತ್ತೀರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಹೈದರಾಬಾದ್ ಪಾಲಿಕೆ ಫಲಿತಾಂಶ:ಬಿಜೆಪಿ ಭರ್ಜರಿ ಮುನ್ನಡೆ,ಟಿಆರ್ ಎಸ್ ಗೆ ಗದ್ದುಗೆ ತಪ್ಪಲಿದೆಯಾ?
ಗಜಪಯಣದಲ್ಲಿ ಸ್ಥಳಿಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಲ್ಲದೆ ಗಂಟೆಕಾಲ ಕಾಯಿಸಿ ನಂತರ ತರಾತುರಿಯಾಗಿ ಬಂದು ಪೂಜೆ ಮಾಡಿದ್ದಲ್ಲದೆ ಶಾಸಕರನ್ನೂ ಆಹ್ವಾನಿಸಿಲ್ಲ. ಮೈಸೂರು ನಗರದಲ್ಲಿ ಎಲ್ಲರನ್ನೂ ಆಹ್ವಾನಿಸುವ ಮೂಲಕ ತಮಗೆ ಅವಮಾನಿಸಿದಂತಾಗಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ನನ್ನ ಸಾಧನೆ ಬಗ್ಗೆ ಪ್ರಶ್ನಿಸುವ ಸಂಸದರು, ಟಿವಿ ಮಾಧ್ಯಮ ಕಂಡಕೂಡಲೇ ಬಡಬಡಾಯಿಸವ ಬದಲು ತಂಬಾಕು ಬೆಳೆಗಾರರ ನೆರವಿಗೆ ನಿಲ್ಲಲಿ ಎಂದರು.
ಉಪ ಚುನಾವಣೆಯಲ್ಲಿ ಗೆದ್ದ ನಂತರ ರಾಜ್ಯಕ್ಕೆ ಮಾದರಿಯಾದ ಗ್ರಾಮದೆಡೆಗೆ ಸರಕಾರದ ನಡಿಗೆ ಕಾರ್ಯಕ್ರಮ ಮಾಡಿ ಬಡವರ ಸಮಸ್ಯೆಗೆ ಸ್ಪಂದಿಸಿದ್ದೇನೆ. ನಂತರ ಕೋವಿಡ್ ದಿಂದ ಸ್ಥಗಿತಗೊಂಡಿದೆ. ಮತ್ತೆ ಅವಕಾಶ ಕೊಟ್ಟರೆ ಮತ್ತೆ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ