ಹುಣಸೂರು : ಮಳೆಯ ಅಬ್ಬರಕ್ಕೆ ಧರೆಗುರುಳಿದ ಮೂರು ತಂಬಾಕು ಬ್ಯಾರನ್
Team Udayavani, Aug 6, 2022, 11:21 AM IST
ಹುಣಸೂರು : ಕಳೆದ ಐದು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಹುಣಸೂರು ತಾಲೂಕಿನಲ್ಲಿ ಸಾಕಷ್ಟು ಆಸ್ತಿ- ಪಾಸ್ತಿ ನಷ್ಟ ಉಂಟು ಮಾಡಿದ್ದರೆ. ಕೆಬ್ಬೆಕೊಪ್ಪಲಿನಲ್ಲಿ ಮೂರು ತಂಬಾಕು ಬ್ಯಾರನ್ ಗಳು ಒಂದರ ಮೇಲೊಂದರಂತೆ ಧರೆಗುರುಳಿದೆ.
ತಾಲೂಕಿನ ಕಸಬಾ ಹೋಬಳಿಯ ಕೆಬ್ಬೆ ಕೊಪ್ಪಲು ಗ್ರಾಮದ ಸತೀಶಾಚಾರಿ. ರಾಜಾಚಾರಿ ಹಾಗೂ ಲಕ್ಷ್ಮಮ್ಮರಿಗೆ ಸೇರಿದ ಬ್ಯಾರನ್ ಗಳು ಇದಾಗಿದ್ದು.
ತಂಬಾಕು ಹದ ಮಾಡುತ್ತಿದ್ದ ವೇಳೆಯೇ ಒಂದರಹಿಂದೊಂದರಂತೆ ಮೂರು ಬ್ಯಾರನ್ ಗಳು ಧರೆಗುರುಳಿ ಬಿದ್ದಿದೆ.
ಬ್ಯಾರನ್ ನಲ್ಲಿ ಹದ ಮಾಡಲು ಏರಿಸಿದ್ದ ಸುಮಾರು 2 ಸಾವಿರ ಕೆ.ಜಿ.ಯಷ್ಟು ಹೊಗೆಸೊಪ್ಪು ಸಂಪೂರ್ಣ ಮಣ್ಣು ಪಾಲಾಗಿದೆ.
ಮೂರು ಬ್ಯಾರನ್ ಹಾಗೂ ಹೊಗೆಸೊಪ್ಪು ಸೇರಿ 7-8 ಲಕ್ಷರೂ ನಷ್ಟ ಉಂಟಾಗಿದೆ.
ವಿಷಯ ತಿಳಿದ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯ ಕ್ಷೇತ್ರ ಪಾಲಕ ಕೂಸಪ್ಪ ಹಾಗೂ ಸಿಬ್ಬಂದಿಗಳು . ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶದ ಮಹಿಳೆಯರಿಗೆ ರಕ್ಷಾ ಬಂಧನ ಗಿಫ್ಟ್ ನೀಡಿದ ಸಿಎಂ ಯೋಗಿ ಆದಿತ್ಯನಾಥ್