ಹುಣಸೂರಲ್ಲಿ ಮಳೆಗೆ ಮೊದಲ ಬಲಿ: ಮನೆಗೋಡೆ ಕುಸಿದು ಬಿದ್ದು ವೃದ್ದೆ ಸಾವು
Team Udayavani, Aug 2, 2022, 2:40 PM IST
ಹುಣಸೂರು: ಕಳೆದ ಎರಡು ದಿನದಿಂದ ಸುರಿಯುತ್ತಿರುವ ಗುಡುಗು, ಬಿರುಗಾಳಿ ಸಹಿತ ಮಳೆಗೆ ಮನೆ ಗೋಡೆ ಕುಸಿದು ಬಿದ್ದು ವೃದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆಂಚನಕೆರೆ ಹೊಸಕೋಟೆಯಲ್ಲಿ ಸೋಮವಾರ ಮದ್ಯರಾತ್ರಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆ ಗ್ರಾಮದ ಲೇ.ಗುರುಮೂರ್ತಿಯವರ ಪತ್ನಿ ಶಾಂತಮ್ಮ(65) ಮೃತಪಟ್ಟವರು.
ರಾತ್ರಿ ಇಡೀ ಬಿದ್ದ ಮಳೆಗೆ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆಯ ಶಾಂತಮ್ಮರ ಮನೆಗೋಡೆ ಕುಸಿದು ಬಿದ್ದಿದೆ. ಮಲಗಿದ್ದ ಶಾಂತಮ್ಮರವರ ಮೇಲೆ ಗೋಡೆ ಬಿದ್ದು ಅವರು, ಸಾವನ್ನಪ್ಪಿದ್ದಾರೆ.
ವಿಷಯತಿಳಿಯುತ್ತಿದ್ದಂತೆ ಶಾಸಕ ಎಚ್.ಪಿ.ಮಂಜುನಾಥ್, ತಹಸೀಲ್ದಾರ್ ಡಾ.ಅಶೋಕ್ . ಆರ್, ನಂದೀಶ್, ಶಿವಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬಕ್ಕೆ ಸಾಂತ್ವಾನ ಹೇಳಿದರು.