ರೈತರು ತಮ್ಮ ಬೆಳೆಗೆ ತಾವೇ ಬೆಲೆ ನಿಗದಿ ಮಾಡಲಿ
Team Udayavani, Jan 20, 2021, 2:21 PM IST
ಮೈಸೂರು: ರೈತರು ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತವಾಗದೆ, ತಮ್ಮ ಬೆಳೆಗೆ ತಾವೇ ಬೆಲೆ ನಿಗದಿಪಡಿಸುವುದು, ತಾವೇ ಬ್ರ್ಯಾಂಡ್ ಮಾಡಿದಲ್ಲಿ ರೈತರ ಆದಾಯ ಖಂಡಿತವಾಗಿಯೂ ದ್ವಿಗುಣ ಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ನಗರದ ಸಿಎಫ್ ಟಿಆರ್ ಐನಲ್ಲಿ ಕೃಷಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಹಾಗೂ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ)ವತಿಯಿಂದ ಮಂಗ ಳವಾರ ಆಯೋಜಿಸಿದ್ದ ಒಂದು ಜಿಲ್ಲೆ, ಒಂದು ಬೆಳೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ:ಪ್ರತಿನಿತ್ಯ ಕೆಲಸ ನೀಡಲು ಕಾರ್ಮಿಕರ ಆಗ್ರಹ
ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯದ ವತಿಯಿಂದ ಆರಂಭವಾಗಿರುವ ಪಿಎಂ ಎಫ್ಎಂಇ ಕಾರ್ಯಕ್ರಮ ರೂಪಿಸಿದ್ದು, ಇದರ ಭಾಗವಾಗಿ ರಾಜ್ಯದ ಪ್ರತಿ ಜಿಲ್ಲೆಗೂ ಒಂದು ಬೆಳೆ ಎಂಬ ಪರಿಕಲ್ಪನೆಯೊಂದಿಗೆ ರೈತರಿಗೆ ಆಹಾರ ಸಂಸ್ಕರಣೆ ಕುರಿತು ತರಬೇತಿ ನೀಡಲಾಗುತ್ತಿದೆ. ಇದರಿಂದ ರೈತರು ತಾವು ಬೆಳೆದ ಉತ್ಪನ್ನಗಳ ಬ್ರ್ಯಾಂಡಿಂಗ್, ಪ್ಯಾಕಿಂಗ್ ಮಾಡಿ ತಮ್ಮ ಕೈಬಿಟ್ಟು ಹೋಗುತ್ತಿರುವ ಲಾಭವನ್ನು ಪಡೆದುಕೊಳ್ಳು ವಂತಾಗಲಿದೆ ಎಂದರು.