ಜಾತ್ರೆಯಲ್ಲಿ ಪರಪುರುಷನನ್ನು ನೋಡಿದ ಪತ್ನಿಯನ್ನು ಕೊಲೆಗೈದ ಪತಿ!
Team Udayavani, Feb 22, 2017, 11:38 AM IST
ಮೈಸೂರು: ಜಾತ್ರೆಯಲ್ಲಿ ಪರಪುರುಷನನ್ನು ನೋಡಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ನಂಜನಗೂಡು ಪತ್ನಿಯನ್ನು ಪತಿಯೊಬ್ಬ ಬರ್ಬರವಾಗಿ ಕೊಚ್ಚಿ ಕೊಲೆಗೈದ ದಾರುಣ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿಯಲ್ಲಿ ನಡೆದಿದೆ.
ಬಸವ ಶೆಟ್ಟಿ ಎಂಬಾತ ಪತ್ನಿ ಮಂಗಳಮ್ಮ (28) ಎಂಬಾಕೆಯನ್ನು ಬರ್ಬರವಾಗಿ ಹೊಲದಲ್ಲಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಮಂಗಳಮ್ಮ ಬಸೊಶೆಟ್ಟಿಯ ಸ್ವಂತ ಅಕ್ಕನ ಮಗಳಾಗಿದ್ದು ಕಳೆದ 15 ವರ್ಷಗಳ ಹಿಂದೆ ವಿವಾಹವಾಗಿದ್ದ ಎಂದು ವರದಿಯಾಗಿದೆ.
ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಬಸವನಿಗಾಗಿ ಶೋಧ ಮುಂದುವರಿಸಿದ್ದಾರೆ.