ಶಾಸಕರಿಂದ ತಾಯಂದಿರ ದಿನಾಚರಣೆ: ಪಾದಪೂಜೆ
Team Udayavani, May 11, 2020, 8:54 AM IST
ಮೈಸೂರು: ಅಮ್ಮಂದಿರ ದಿನಾಚರಣೆ ಪ್ರಯುಕ್ತ ಶಾಸಕ ಎಸ್.ಎ.ರಾಮದಾಸ್ ತಮ್ಮ ಕ್ಷೇತ್ರದಲ್ಲಿನ ಹಿರಿಯರಿಗೆ ಪಾದ ಪೂಜೆ ಮಾಡುವ ಮೂಲಕ ವಿಶೇಷವಾಗಿ ಅಮ್ಮಂದಿರ ದಿನವನ್ನು ಆಚರಿಸಿದರು.
ಈ ಸಂದರ್ಭ ಮಾತನಾಡಿ, ಅಮ್ಮಂದಿರ ದಿನ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ನಮ್ಮ ದೇಶದಲ್ಲಿ ಭೂಮಿಯನ್ನು ಮಾತೃಭೂಮಿ ಎಂದು, ಹಸುವನ್ನು ಗೋಮಾತೆ ಎಂದು ಹೀಗೆ ಪ್ರಮುಖವಾದು ದಕ್ಕೆಲ್ಲಾ ತಾಯಿಗೆ ಹೋಲಿಸಿ ಪೂಜಿಸಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಅಮ್ಮನ ಪಾತ್ರ ಬಹಳ ಪ್ರಮುಖವಾದದ್ದು. ಹಾಗೇ ನನ್ನ ಜೀವನದಲ್ಲೂ ತಾಯಿ ದೇವರಿಗಿಂತಲು ಹೆಚ್ಚು ಎಂದು ಹೇಳಿದರು.
ಕೆ.ಆರ್ ಕ್ಷೇತ್ರ ವ್ಯಾಪ್ತಿಯ ಸಾವಿತ್ರಿ ಪ್ರಭಾಕರ್, ಅನಂತ ಲಕ್ಷ್ಮೀ, ಡಾ.ಇಂದಿರಾ ನರಸಿಂಹನ್, ಸವಿತಾ ಅವರ ಪಾದ ತೊಳೆದು ಹಾರ ಶಾಲು ಹಾಕಿ ಗೌರವ ಸಮರ್ಪಿಸಿದರು. ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಬಿಜೆಪಿ ಮುಖಂಡರಾದ ನೂರ್ ಫಾತಿಮಾ, ವಿದ್ಯಾ ಅರಸ್, ಎಂ. ಆರ್.ಬಾಲಕೃಷ್ಣ, ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್ ಜೆ, ಸಂತೋಷ್, ಶಿವಪ್ಪ, ಅನ್ನಪೂರ್ಣ ಆರ್, ರೇವತಿ, ವಿ.ಎನ್. ಕೃಷ್ಣ, ಹೇಮಂತ್ ಕುಮಾರ್ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ