Mysuru ಅರಮನೆ ಆನೆಗಳಿಗೆ ಕೂಡಿಕೆ ಭಾಗ್ಯ: ಚಂಚಲೆ, ಪ್ರೀತಿಯೊಂದಿಗೆ ಮಹೇಂದ್ರ, ಭೀಮನ ಚಿನ್ನಾಟ

ವಿರಹ ವೇದನೆಯಿಂದ ಬಳಲಿದ್ದವು... ಏಕತಾನತೆ ಹೋಗಲಾಡಿಸುವ ಪ್ರಯತ್ನ ಯಶಸ್ವಿ...

Team Udayavani, Oct 14, 2023, 5:57 PM IST

1-asdsadsad

ಮೈಸೂರು: ಇಡೀ ವರ್ಷ ಬೇರೊಂದು ಆನೆಗಳ ಸಂಪರ್ಕವಿಲ್ಲದೆ ವಿರಹ ವೇದನೆಯಿಂದ ಬಳಲಿ ಬಾಡಿದ್ದ ಅರಮನೆ ಹೆಣ್ಣಾನೆಗಳಿಗೆ ಕೊನೆಗೂ ಕೂಡಿಕೆ ಭಾಗ್ಯ ಬಂದಿದೆ. ದಸರಾ ಗಜಪಡೆಯ ಗಂಡಾನೆಗಳು ಚಂಚಲೆ,ಪ್ರೀತಿಯೊಂದಿಗೆ ಚೆಲ್ಲಾಟವಾಡಿದವು.

ಹೌದು, ಕಳೆದ ಹಲವು ವರ್ಷಗಳಿಂದ ಅರಮನೆ ಮಂಡಳಿ ಉಸ್ತುವಾರಿ ಯಲ್ಲಿರುವ ಚಂಚಲೆ, ಪ್ರೀತಿ ಆನೆಗಳು ಅರಮನೆ ಕೋಟೆಯೊಳಗಷ್ಟೇ ಸೀಮಿತವಾಗಿದ್ದು, ತಮ್ಮ ಇಡೀ ಯೌವ್ವನವನ್ನು ಕೋಡಿ ರಾಮೇಶ್ವರ ದೇವಸ್ಥಾನದ ಬಳಿಯ ಅರಳಿಮರದಡಿ ಗಂಡಾನೆಗಳ ಸಂಘವಿಲ್ಲದೇ ವಿರಹ ವೇದ ನೆಯಿಂದ ಬಳಲಿದ್ದವು.

ಈ ಆನೆಗಳ ಮೂಕ ವೇದನೆಯ ಸೂಕ್ಷ್ಮವನ್ನರಿತ ಅರಣ್ಯಾಧಿಕಾರಿಗಳು ಕೆಲ ವರ್ಷಗಳಿಂದ ಪ್ರತಿಬಾರಿಯ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳಲ್ಲಿ ಕೆಲಗಂಡಾನೆಗಳನ್ನು ಅರಮನೆ ಆನೆಗಳೊಂದಿಗೆ ಕೂಡಿಕೆಗೆ ಬಿಡುವ ಮೂಲಕ ಅವುಗಳ ಏಕತಾನತೆಯನ್ನು ಹೋಗಲಾಡಿಸುವ ಪ್ರಯೋಗ ಮಾಡಿದರು. ಅದರಂತೆ ಈ ಬಾರಿಯ ದಸರಾ ಉತ್ಸವದಲ್ಲಿ ಜಂಬೂ ಸವಾರಿ ಯಶಸ್ವಿಗೊಳಿಸಲು ಆಗಮಿಸಿರುವ
ಮಹೇಂದ್ರ, ಭೀಮ ಆನೆಗಳು ಚಂಚಲೆ ಮತ್ತು ಪ್ರೀತಿ ಆನೆಗಳೊಂದಿಗೆ ಕೂಡಿ ಚೆಲ್ಲಾಟವಾಡಿದವು.

ನಾಚಿ ನೀರಾದರು:ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ರುವ ಗಜಪಡೆ ಗಂಡಾನೆಗಳಾದ ಅರ್ಜುನ, ಮಹೇಂದ್ರ, ಭೀಮ ಮತ್ತು ಧನಂಜಯ ಆನೆಗಳು ಅರಮನೆ ಆನೆಗಳೊಂದಿಗೆ ಬೆರೆತು ಅವುಗಳ ಏಕತಾನತೆ ಹೋಗಲಾಡಿಸಲು ಪ್ರಯತ್ನಿಸಿದವು. ಶುಕ್ರವಾರ ಬೆಳಗ್ಗೆ ಮದವೇರಿದ ಮಹೇಂದ್ರ ಪ್ರೀತಿಯೊಂದಿಗೆ ಸೇರಿ ಗಂಟೆಗೂ ಹೆಚ್ಚು ಕಾಲ ಏಕಾಂತವಾಸ ಅನುಭವಿಸಿದ. ಈ ವೇಳೆ ಆನೆಗಳ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೌತುಕದಿಂದ ಕಂಡು ನಾಚಿ ನೀರಾದ ದೃಶ್ಯವೂ ಕಂಡು ಬಂದಿತು.

ಅರಮನೆ ಸುಪರ್ದಿಯಲ್ಲಿ
ರಾಜವಂಶಸ್ಥರಿಗೆ ವಿಜಯದಶಮಿಯಂದು ಮತ್ತು ಇತರೆ ಧಾರ್ಮಿಕ ಕಾರ್ಯ ಗಳಿಗೆ ಆನೆ, ಒಂಟೆ, ಗೋವು ಅಗತ್ಯವಿದ್ದು ಅದರಂತೆ ಒಂಟೆ, ಗೋವು ಮತ್ತು ಆನೆಗಳನ್ನು ಅರಮನೆಯಲ್ಲೇ ಸಲಹಲಾಗುತ್ತಿದೆ. ಅರಣ್ಯ ಇಲಾಖೆ ಕಾನೂನು ಮತ್ತಷ್ಟು ಬಲಗೊಂಡು ವನ್ಯಜೀವಿಗಳನ್ನು ಖಾಸಗಿಯವರು ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ನಿಯಮ ರೂಪಿತವಾದಾಗ ವಿವಿಧ ಸರ್ಕಸ್‌ ಕಂಪನಿಗಳಲ್ಲಿದ್ದ ಆನೆಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಕೆಲವನ್ನು ಸಾಕಾನೆ ಶಿಬಿರಕ್ಕೆ ಕಳಿಸಿದರೆ ಇನ್ನೂ ಕೆಲವನ್ನು ಅರಮನೆಗೆ ನೀಡಿತ್ತು.

ಇಲಾಖೆ ನೀಡಿದ್ದ 7 ಆನೆಗಳ ಪೈಕಿ 5 ಆನೆ 2 ವರ್ಷಗಳ ಹಿಂದಿನವರಗೆ ಅರಮನೆಯಲ್ಲೇ ಇದ್ದವು. ಆದರೆ, ಅವುಗಳ ಪಾಲನೆ ದೃಷ್ಟಿಯಿಂದ ಗುಜರಾತ್‌ಗೆ ನೀಡಲಾಯಿತು. ಸದ್ಯಕ್ಕೆ ಅರಮನೆಯಲ್ಲಿ ಚಂಚಲೆ, ಪ್ರೀತಿ ಆನೆಗಳಷ್ಟೇ ಅರಮನೆ ಸುಪರ್ದಿಯಲ್ಲಿ ಉಳಿದಿವೆ.

ಸತೀಶ್‌ ದೇಪುರ

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.