ನಾಗರಹೊಳೆ: ಸಫಾರಿ ವಾಹನದ ಮೇಲೆ ಸಲಗ ದಾಳಿ; ಕೂದಲೆಳೆ ಅಂತರದಲ್ಲಿ ಪಾರು
Team Udayavani, Sep 8, 2022, 10:00 PM IST
ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಸಫಾರಿ ವಾಹನವನ್ನೇ ಸಲಗವೊಂದು ಹಿಮ್ಮೆಟ್ಟಿಸಿರುವ ಘಟನೆ ನಡೆದಿದೆ.
ನಾಗರಹೊಳೆ ಉದ್ಯಾನವನದ ದಮ್ಮನಕಟ್ಟೆ ಸಫಾರಿಯಲ್ಲಿ ಘಟನೆ ನಡೆದಿದ್ದು, ಜೆಎಲ್ ಆರ್ ಸಫಾರಿ ವಾಹನದ ಚಾಲಕ ಪ್ರಕಾಶ್ ಎದೆಗುಂದದೆ ಚಾಣಾಕ್ಷತನದಿಂದ ಸಲಗ ವಾಹನವನ್ನು ಬೆನ್ನಟ್ಟಿ ಬಂದರೂ ಎದೆ ಗುಂದದೆ ವಾಹನವನ್ನು ಹಿಮ್ಮುಖವಾಗಿ ಓಡಿಸಿ ಆನೆಯನ್ನು ಹಿಮ್ಮೆಟ್ಟಿಸಿ ಪ್ರವಾಸಿಗರನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿರುವ ದೃಶ್ಯವನ್ನು ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ವಿಡಿಯೋ ಮಾಡಿದ್ದಾರೆ.