ಗಂಡು ಆನೆ ಮರಿಗೆ ನಾಮಕರಣ: ಶ್ರೀದತ್ತಾತ್ರೇಯನಾದ ಲಕ್ಷ್ಮೀ ಸುತ
Team Udayavani, Sep 15, 2022, 7:50 PM IST
ಮೈಸೂರು: ಅರಮನೆ ಆವರಣದಲ್ಲಿ ಲಕ್ಷ್ಮೀ ಆನೆಗೆ ಜನಿಸಿದ ಗಂಡು ಮರಿಗೆ ಶ್ರೀದತ್ತಾತ್ರೇಯ ಎಂದು ಅರಣ್ಯ ಇಲಾಖೆ ನಾಮಕರಣ ಮಾಡಿದೆ.
ಇದನ್ನೂ ಓದಿ:ನಿವೃತ್ತಿ ಘೋಷಿಸಿದ ಟೆನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಬಂಡೀಪುರದ ರಾಮಪುರ ಸಾಕಾನೆ ಶಿಬಿರದ 21 ವರ್ಷದ ಲಕ್ಷ್ಮೀ ಆನೆ ಮಂಗಳವಾರ ರಾತ್ರಿ ಗಂಡಾನೆಗೆ ಜನ್ಮ ನೀಡಿತ್ತು. ದಸರಾ ಆನೆ ಗಂಡು ಮರಿಗೆ ಜನ್ಮ ನೀಡಿದ ಸುದ್ದಿ ಕೇಳಿ ಇಡೀ ನಗರವೇ ಸಂಭ್ರಮಿಸಿತ್ತಲ್ಲದೇ ತಾಯಿ ಮತ್ತು ಮರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅರಮನೆ ಆವರಣದಲ್ಲಿ ಲಕ್ಷ್ಮೀ ಆನೆ ಗಂಡು ಮರಿಗೆ ಜನ್ಮ ನೀಡಿದ್ದರಿಂದ ಡಿಸಿಎಫ್ ಡಾ.ವಿ. ಕರಿಕಾಳನ್ ಅವರು ಆನೆ ಮರಿಗೆ ಸೂಕ್ತ ಹೆಸರಿಡುವಂತೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಕೋರಿದ್ದರು. ಬಳಿಕ ಪ್ರಮೋದಾ ದೇವಿ ಒಡೆಯರ್ ಅವರು ಶ್ರೀದತ್ತಾತ್ರೇಯ ಎಂದು ಹೆಸರು ಸೂಚಿದ್ದರಿಂದ ಗುರುವಾರ ಲಕ್ಷ್ಮೀ ಸುತನಿಗೆ ಶ್ರೀದತ್ತೇಯ ಎಂದು ನಾಮಕರಣ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ