ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಆಕ್ಸಿಜನ್ ಪೂರೈಸಿ
Team Udayavani, Apr 30, 2021, 4:08 PM IST
ಮೈಸೂರು: ಜಿಲ್ಲೆಯಲ್ಲಿರುವ ಮೆಡಿಕಲ್ ಆಕ್ಸಿಜನ್ ಉತ್ಪಾದಕರು ಹಾಗೂ ರೀಫಿಲ್ಲಿಂಗ್ ಸಂಸ್ಥೆಗಳೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು.
ಕೋವಿಡ್ ಹಿನ್ನೆಲೆಯಲ್ಲಿಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಸರ್ಕಾರನೀಡಿರುವ ಮಾರ್ಗಸೂಚಿ ಅನ್ವಯ ಆಕ್ಸಿಜನ್ ನೀಡಬೇಕು.ವೈದ್ಯಕೀಯ ಉದ್ದೇಶಕ್ಕೆ ಮತ್ತುಸರ್ಕಾರ ತಿಳಿಸುವ ಸಂಸ್ಥೆಗಳಿಗೆಮಾತ್ರ ಆಕ್ಸಿಜನ್ ನೀಡಬೇಕು.
ಆಕ್ಸಿಜನ್ ಉತ್ಪಾದಕ ಮತ್ತು ಆಕ್ಸಿಜನ್ ರೀಫಿಲ್ಲಿಂಗ್ ಕಂಪನಿಗಳಿಗೆಒಬ್ಬೊಬ್ಬರು ನೋಡಲ್ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಗೆ ಅಗತ್ಯವಿರುವ ಮೆಡಿಕಲ್ ಆಕ್ಸಿಜನ್ ಪೂರೈಸುವುದು ಈಸಂಸ್ಥೆಗಳು, ಡ್ರಗ್ಸ್ ಕಂಟ್ರೋಲರ್ಜವಾಬ್ದಾರಿ, ಯಾವ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗಬಾರದು ಎಂದು ರೋಹಿಣಿ ಸಿಂಧೂರಿ ತಿಳಿಸಿದರು.