ಗಾಂಧಿ ಬಂದಿದ್ದ ಬದನವಾಳುಗೆ ರಾಹುಲ್ ಭೇಟಿ
ಜೋಡೋ ಯಾತ್ರೆಯೊಂದಿಗೆ ಮೈಸೂರು ನಗರದತ್ತ ಪಾದಯಾತ್ರೆಯಲ್ಲಿ ಸಾಗುವರು
Team Udayavani, Sep 16, 2022, 6:31 PM IST
ನಂಜನಗೂಡು: ಕಳೆದ ಶತಮಾನದಲ್ಲಿ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ತಾಲೂಕಿನ ಬದನವಾಳಿಗೆ ಅ.2ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಂಜನಗೂಡಿಗೆ ಬುಧವಾರ ಆಗಮಿಸಿದ್ದ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಯವರ ಭಾರತ ಜೋಡೋ ಯಾತ್ರೆ ಕ್ರಮಿಸುವ ಕುರಿತು ಮಾಹಿತಿ ಪಡೆದು,
ಗುರುವಾರ ಮತ್ತೆ ನಂಜನಗೂಡಿಗೆ ಆಗಮಿಸಿ ಬದನವಾಳಿನ ಖಾದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಡ್ಲುಪೇಟೆಯಿಂದ ಅ.1ರಂದು ಜೋಡೋ ಯಾತ್ರೆಯೊಂದಿಗೆ ಆಗಮಿಸುವ ರಾಹುಲ್ ಗಾಂಧಿ, ಅಂದು ರಾತ್ರಿಯನ್ನು ತಾಲೂಕಿನ ತಾಂಡವಪುರದ ಎಂಐಟಿ ಕಾಲೇಜಿನ ಆವರಣದ ಮೈದಾನದಲ್ಲಿ ಕಳೆದು, 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದ ಬದನವಾಳುವಿನ ಖಾದಿ ಕೇಂದ್ರಕ್ಕೆ ಭೇಟಿ ನೀಡಿ
ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ ಎಂದು ಹೇಳಿದರು.
ನಂತರ ಅವರು ಮತ್ತೆ ತಾಂಡವಪುರಕ್ಕೆ ಆಗಮಿಸಿ ಜೋಡೋ ಯಾತ್ರೆಯೊಂದಿಗೆ ಮೈಸೂರು ನಗರದತ್ತ ಪಾದಯಾತ್ರೆಯಲ್ಲಿ ಸಾಗುವರು ಎಂದು ಅವರು ನುಡಿದರು.
ಡಿಕೆಶಿಗೆ ಸ್ವಾಗತ: ಚಾಮರಾಜನಗರ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಮಾಜಿ ಸಂಸದ ಆರ್.ಧ್ರುವನಾರಾಯಣ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿಯವರೊಂದಿಗೆ ಆಗಮಿಸಿದ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪಕ್ಷದ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ತಾಲೂಕು ಅಧ್ಯಕ್ಷರಾದ ಕುರಹಟ್ಟಿ ಮಹೇಶ, ಶ್ರೀಕಂಠನಾಯಕ, ಸಿ. ಎಂ.ಶಂಕರ್, ಎಸ್.ಸಿ.ಬಸವರಾಜು ಮತ್ತಿತರರು ಸ್ವಾಗತಿಸಿದರು. ನಂತರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಪಕ್ಷಾಧ್ಯಕ್ಷರಿಗೆ ತಾಲೂಕಿನ ಕೈ ಮುಖಂಡರಾದ ನಂದಕುಮಾರ್ ಹಡೆತಲೆ, ದೊರೆಸ್ವಾಮಿ ನಾಯಕ, ಶಿವಪ್ಪದೇವರು, ನಾಗೇಶರಾಜು, ಗಂಗಾಧರ್, ಖಾದರ್, ಅಕºರ್, ಶಿವಣ್ಣ ಮತ್ತಿತರರು ಹಾರ ಹಾಕಿ ಸ್ವಾಗತಿಸಿದರು.
ಬಿತ್ತನೆ ಮಾಡುವಾಗ ಬೀಜದ ಆಯ್ಕೆ
ನಂಜನಗೂಡು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಕ್ಷೇತ್ರದಲ್ಲಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಪೋಟಿ ನಡೆಯುತ್ತಿರುವ ಕುರಿತು ಸೂಕ್ತ ಉತ್ತರ ನೀಡದೆ ನುಣಿಚಿಕೊಂಡರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಂಸದ ಆರ್.ಧ್ರುವನಾರಾಯಣ ಈಗಾಗಲೇ ಕ್ಷೇತ್ರದ ಪ್ರತಿ ಪಂಚಾಯ್ತಿಯನ್ನು ಭೇಟಿ ಮಾಡಿ ಸಂಘಟನೆಗೆ ಇಳಿದಿದ್ದಾರೆ. ಮಾಜಿ ಸಚಿವ ಡಾ.ಎಚ್
.ಸಿ.ಮಹದೇವಪ್ಪ ಜೋಡೋ ಯಾತ್ರೆ ನಂತರ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ಹಿರಿಯರ ಮಧ್ಯೆ ಕೇಶವಮೂರ್ತಿ ಇದ್ದಾರೆ. ಹೀಗಿರುವಾಗ ಪಕ್ಷದ ಪರಿಸ್ಥಿತಿ ಹೇಗೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಭೂಮಿಯನ್ನು ಉತ್ತಿ ಹಸನು ಮಾಡಿದಷ್ಟು ಒಳ್ಳೆಯದು. ಎಲ್ಲರೂ ಉತ್ತಲಿ, ಬೀಜ ಬಿತ್ತುವಾಗ ನಾನು ಆಯ್ಕೆ ಮಾಡಿ ಘೋಷಿಸುತ್ತೇನೆ ಎನ್ನುವುದರ ಮೂಲಕ ಪಕ್ಷದ ಹುರಿಯಾಳುಗಳ ಹೆಸರನ್ನು ಗೌಪ್ಯವಾಗಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ