ಮತ್ತೆ ಮತ್ತೆ ಕಾಡುತ್ತಿದೆ ಚಾಮುಂಡೇಶ್ವರಿ ಸೋಲು! ಅಭಿಮಾನಿಗಳ ಮೇಲೆ ಕೋಪಗೊಂಡ ಸಿದ್ದರಾಮಯ್ಯ
Team Udayavani, Nov 19, 2021, 4:43 PM IST
ಮೈಸೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕಳೆದ ವಿಧಾನಸಭೆ ಚುನಾವಣೆಯ ಸೋಲು ಮತ್ತೆ ಮತ್ತೆ ಕಾಡುತ್ತಿರುವಂತಿದೆ. ಅದಕ್ಕೆ ಕಾರಣ ಅವರು ಇಂದು ಅಭಿಮಾನಿಗಳ ಬಳಿ ನಡೆದುಕೊಂಡ ರೀತಿ.
ಮೈಸೂರಿನ ಟಿಕೆ.ಲೇಔಟ್ನಲ್ಲಿರುವ ತಮ್ಮ ನಿವಾಸದ ಮುಂದೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರಿಗೆ ಎಂಎಲ್ ಸಿ ಟಿಕೆಟ್ ನೀಡುವಂತೆ ಮರಿಗೌಡ ಬೆಂಬಲಿಗರು ಸಿದ್ದರಾಮಯ್ಯರನ್ನು ಒತ್ತಾಯ ಮಾಡಿದರು. ಈ ವೇಳೆ ಕೆರಳಿದ ಸಿದ್ದರಾಮಯ್ಯ ಟಿಕೆಟ್ ಕೇಳಿದ ಅಭಿಮಾನಿಗಳಿಗೆ ಮುಖದ ಮಾಸ್ಕ್ ತೆಗೆದು ಬೈದರು.
ಇದನ್ನೂ ಓದಿ:ಹೋರಾಟದಲ್ಲಿ ರೈತರ ಜೀವಹಾನಿ ಆಗಿದ್ದಕ್ಕೆ ಯಾರು ಹೊಣೆ?: ವೀರಪ್ಪ ಮೊಯ್ಲಿ
“ಎಲ್ಲರೂ ನನ್ನನ್ನು ಸೋಲಿಸಿ ಈಗ ಟಿಕೆಟ್ ಕೇಳಲು ಇಲ್ಲಿ ಬಂದಿದ್ದೀರ? ನಾಚಿಕೆ ಆಗುವುದಿಲ್ವ ನಿಮಗೆ” ಎಂದು ಸಿದ್ದರಾಮಯ್ಯ ಬೈದು ಕಳುಹಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನ ಜಿಟಿ ದೇವೇಗೌಡ ವಿರುದ್ಧ ಸೋಲನುಭವಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ