ಹಾವು ಮಾರಾಟ: ನಾಲ್ವರು ಸೆರೆ
Team Udayavani, Feb 21, 2019, 10:19 AM IST
ಹುಣಸೂರು: ಎರಡು ತಲೆಯ ಹಾವೆಂದು ನಂಬಿಸಿ ಏಕ ತಲೆಯ ಹಾವನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ನ ಹಕ್ಕಿಪಿಕ್ಕಿ ಜನಾಂಗದ ಅರವಿಂದ್, ಕೊಡಗಿನ ನಿಡುಗಾಣಿ ಗ್ರಾಮದ ಕಾವೇರಪ್ಪ, ಕಾಲೂರಿನ ಸೋಮಯ್ಯ, ವಿರಾಜಪೇಟೆ ಬಳಿಯ ಮಲ್ಮಾರೆ ಗ್ರಾಮದ ಅಭಿಷೇಕ್ ಬಂಧಿತ ಆರೋಪಿಗಳು. ಪೊಲೀಸ್ ದಾಳಿ ಸುಳಿವರಿತ ಮೂವರು
ಪರಾರಿಯಾಗಿದ್ದಾರೆ.
ಘಟನೆ ವಿವರ: ಈ ಆರೋಪಿಗಳು ಮಂಗಳವಾರ ಮಧ್ಯರಾತ್ರಿ ನಗರಕ್ಕೆ ಸಮೀಪದ ಹೆದ್ದಾರಿಯ ಹಾಳಗೆರೆ ವೃತ್ತದ ಬಳಿಯ ಹೋಟೆಲ್ ಅಮೃತ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಹಾವಿನ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಎಸ್ಸೆ„ ಮಹೇಶ್ರಿಗೆ ಬಂದ ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಸುತ್ತುವರೆದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಾಳಿ ವೇಳೆ ಜಿಪ್ಸಿ ಹಾಗೂ ಸ್ಕೂಟರ್ ಹಾಗೂ ಹಾವನ್ನು ವಶಕ್ಕೆ ಪಡೆದಿದ್ದಾರೆ. ಟೈಗರ್ ಬ್ಲಾಕ್ನ ಅರವಿಂದ ಹಾವನ್ನು ಹಿಡಿದು ಕೊಡಗಿನವರ ಸಹಕಾರದಲ್ಲಿ ಇತರೆಡೆಗೆ ಒಂದು ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಎಸ್ಸೆ„ ಮಹೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ