ಹುಣಸೂರು: ಮನೆ ಬೀಗ ಮುರಿದು ಲಕ್ಷಾಂತರ ರೂ. ನಗದು, ಚಿನ್ನಾಭರಣ ಕಳ್ಳತನ
Team Udayavani, Jun 11, 2022, 11:00 AM IST
ಹುಣಸೂರು: ಮನೆಯ ಬೀಗ ಒಡೆದು ಲಾಕರ್ನಲ್ಲಿಟ್ಟಿದ್ದ 8.10 ಲಕ್ಷ ರೂ. ನಗದು ಹಾಗೂ 53 ಗ್ರಾಂ. ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಮಾರಗೌಡನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಗಾವಡಗೆರೆ ಹೋಬಳಿಯ ಮಾರಗೌಡನಹಳ್ಳಿ ಗ್ರಾಮದ ಮಹದೇವಮ್ಮ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ
ಮಹದೇವಮ್ಮರ ಪುತ್ರ ನಾಲ್ಕೈದು ದಿನಗಳ ಹಿಂದಷ್ಟೆ ಹುಣಸೂರಿನ ಬ್ಯಾಂಕೊಂದರಲ್ಲಿ ಸಾಲ ಪಡೆದು ಹಣವನ್ನು ಮಾರಗೌಡನಹಳ್ಳಿಯ ಮನೆಯ ಬೀರುವಿನಲ್ಲಿಟ್ಟಿದ್ದರು. ಮಹದೇವಮ್ಮ ಹಾಗೂ ಮತ್ತೊಬ್ಬ ಮಗ ಕಾರ್ಯ ನಿಮಿತ್ತ ಹುಣಸೂರಿನ ಮನೆಯಲ್ಲಿದ್ದರು. ಈ ಬಗ್ಗೆ ತಿಳಿದಿರುವರೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಹದೇವಮ್ಮನವರು ಗ್ರಾಮಕ್ಕೆ ಹಿಂದುರುಗಿ ಬಂದಾಗಲೇ ಕಳ್ಳತನ ನಡೆದಿರುವುದು ತಿಳಿಯಿತು.
ಇದನ್ನೂ ಓದಿ:ನೂಪುರ್ ಹೇಳಿಕೆ ವಿರೋಧಿಸಿ ಪ್ರತಿಭಟನೆ: ರಾಜ್ಯದೆಲ್ಲೆಡೆ ಖಾಕಿ ಕಣ್ಗಾವಲು
ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮಕ್ಕೆ ಎಸ್.ಪಿ.ಚೇತನ್, ಡಿವೈಎಸ್ಪಿ ರವಿಪ್ರಸಾದ್, ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.