ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

ಗುಡ್ಡದಲ್ಲಿ ಕಾಮಗಾರಿ ನಡೆಸುವಾಗಿ ಕೊಳವೆ ಒಡೆದ ವಿದ್ಯುತ್‌ ಇಲಾಖೆ , ಕಳೆದ ಎರಡ್ಮೂರು ದಿನಗಳಿಂದ ನೀರಿನ ಅಭಾವ

Team Udayavani, Apr 13, 2021, 4:08 PM IST

ಕೊಳವೆ ಒಡೆದಿದ್ದಕ್ಕೆ 16 ಗ್ರಾಮಗಳಿಗೆ ಹಬ್ಬಕ್ಕೆ ನೀರಿಲ್ಲ

ನಂಜನಗೂಡು: ಇಲಾಖೆಗಳ ಯಡವಟ್ಟಿನಿಂದ ಬರೋಬ್ಬರಿ 16 ಗ್ರಾಮ ಗಳಿಗೆ ಕುಡಿಯುವ ನೀರು ಇಲ್ಲದಂತಾಗಿದ್ದು, ಅದರಲ್ಲೂ ಹಬ್ಬದ ಹಿಂದೆ ಮುಂದೆಯೇ ನೀರಿಲ್ಲದೇ ಪರಿತಪಿಸುವಂತೆ ಆಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಸದ್ಯಕ್ಕೆ ನೀರು ಸಿಗುವುದು ಅನುಮಾನವಾಗಿದೆ.

16 ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆ: ಕೌಲಂದೆ ಹೋಬಳಿಯ ಸುಮಾರು 57 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಹದೇವನಗರದ ಪರ್ವತಾಂಜನೇಯನ ಗುಡ್ಡದ ಮೇಲೆ 2008ರಲ್ಲಿ ಬೃಹತ್‌ ಹೆಡ್‌ ಒವರ್‌ ಟ್ಯಾಂಕ್‌ ನಿರ್ಮಿಸಲಾಗಿದೆ. 5 ಲಕ್ಷ ಗ್ಯಾಲನ್‌ ನೀರು ಸಾಮರ್ಥ್ಯದ ಟ್ಯಾಂಕ್‌ಗೆ ಪ್ರತಿದಿನ ಕಬಿನಿ ನದಿ ಮೂಲಕ ನೀರು ತುಂಬಿಸಿ, ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ 57 ಹಳ್ಳಿಗಳಿಗೆ ನೀಡಬೇಕಾಗಿದ್ದ ನೀರನ್ನು ಕೇವಲ 16 ಗ್ರಾಮಗಳಿಗೆ ನೀಡಲಾಗುತ್ತಿದೆ. ಅದೂ ಕೂಡ ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.

ವಿದ್ಯುತ್‌ ಇಲಾಖೆ ಯಡವಟ್ಟು: ಗುಡ್ಡದ ಮೇಲೆ ಬೃಹತ್‌ ಹೆಡ್‌ ಒವರ್‌ ಟ್ಯಾಂಕ್‌ ನಿರ್ಮಿಸಲಾಗಿದ್ದು, ಇಲ್ಲಿರುವ ಹಳೆಯ ವಿದ್ಯುತ್‌ ಕಂಬಗಳನ್ನು ಬದಲಾಯಿಸಿ ಹೈಟೆಕ್‌ ವ್ಯವಸ್ಥೆ ಮಾಡಲು ಹೊರಟ ವಿದ್ಯುತ್‌ ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸುವಾಗ ಜೆಸಿಬಿ ಯಂತ್ರಕ್ಕೆ ಸಿಲುಕಿ ಈ ಟ್ಯಾಂಕ್‌ಗೆ ನೀರು ಸರಬರಾಜಾ ಗುವ ಕೊಳವೆ ಒಡೆದುಹೊಗಿದೆ. ಹೀಗಾಗಿ ನೀರು ಗುಡ್ಡದಲ್ಲೇ ಸೋರಿಕೆಯಾಗುತ್ತಿರುವುದರಿಂದ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಕೊಳವೆಗೆ ಹಾನಿಯಾದ ತಕ್ಷಣವೇ ವಿದ್ಯುತ್‌ ಇಲಾಖೆಯ ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿ ಯಾರಿಗೂ ಹೇಳದೆ ಅಲ್ಲಿಂದ ವಾಪಸ್ಸಾಗಿ ಮೌನ ವಹಿಸಿದರು.

ಇದೀಗ ಟ್ಯಾಂಕ್‌ಗೆ ನೀರು ತುಂಬಲು ಮೋಟಾರ್‌ ಚಾಲನೆ ಮಾಡಿದ ತಕ್ಷಣವೇ ಭಾರೀ ಪ್ರಮಾಣದ ನೀರು ನೀರು ಗುಡ್ಡದ ಮೇಲೆ ಸೋರಿಕೆಯಾಗುತ್ತಿದೆ. ಟ್ಯಾಂಕಿಗೆ ತೊಟ್ಟು ನೀರು ಸಹ ತಲು ಪುತ್ತಿಲ್ಲ. ಸದ್ಯದ ಮಟ್ಟಿಗೆ ಮೋಟರ್‌ ಸ್ಥಗಿತಗೊಳಿಸಲಾಗಿದ್ದು, ಕೌಲಂದೆ ಹೋಬಳಿಯ 16 ಗ್ರಾಮಗಳ ಜನರು ಕಳೆದ ಮೂರು ದಿನಗಳಿಂದನೀರಿಲ್ಲದೇ ಪರದಾಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು, ನಮಗೆ ನೀರುಪೂರೈಸುವವರು ಯಾರು, ಅದರಲ್ಲೂ ಯುಗಾದಿ ಹಬ್ಬದ ವೇಳೆಯೇಈ ಪರಿಸ್ಥಿತಿ ನಿರ್ಮಾಣವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣ ನೀರುಸರಬರಾಜು ಇಲಾಖೆ, “ಗುಡ್ಡದ ಮೇಲೆ ನೀರು ಪೂರೈಕೆ ಕೊಳವೆ ಯನ್ನು ವಿದ್ಯುತ್‌ ಇಲಾಖೆಯವರು ಹಾನಿಪಡಿಸಿದ್ದಾರೆ. ಹೀಗಾಗಿ ಅವರೇ ಇದನ್ನು ದುರಸ್ತಿ ಮಾಡಬೇಕು’ ಎಂದು ಸ್ಪಷ್ಟನೆ ನೀಡಿದೆ.ಆದರೆ, ನೀರು ಪೂರೈಕೆ ಕೊಳವೆ ಒಡೆದಿರುವ ವಿದ್ಯುತ್‌ ಇಲಾಖೆಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೊಳವೆ ಒಡೆದುನಾಲ್ಕು ದಿನ ಕಳೆದರೂ ಯಾರೊಬ್ಬರೂ ದುರಸ್ತಿಗೆ ಮುಂದಾಗಿಲ್ಲ. ಒಟ್ಟಾರೆ ಇಲಾಖೆಗಳ ನಿರ್ಲಕ್ಷ್ಯ ಧೋರಣೆ, ಅಸಡ್ಡೆ ಮನೋಭಾವ ದಿಂದ16 ಹಳ್ಳಿಗಳ ಸಹಸ್ರಾರು ಮಂದಿ ನೀರಿಲ್ಲದೇ ಪರಿತಪಿ ಸು ವಂತಾಗಿದೆ. ಈ  ಅವ್ಯವಸ್ಥೆಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.

ವಿದ್ಯುತ್‌ ಇಲಾಖೆಯೇ ಜವಾಬ್ದಾರಿ ಹೊರಲಿ :

ಗುಡ್ಡದ ಮೇಲೆ ವಿದ್ಯುತ್‌ ಕಂಬ ಬದಲಾಯಿಸುವಕಾಮಗಾರಿ ನಡೆಸುತ್ತಿದ್ದ ವಿದ್ಯುತ್‌ ಇಲಾಖೆಯೇಜೆಸಿಬಿ ಯಂತ್ರದ ಮೂಲಕ ಕೊಳವೆಯನ್ನುಒಡೆದಿದೆ. ಇಲಾಖೆ ಅಧಿಕಾರಿಗಳೇ ಕೊಳವೆಯನ್ನುದುರಸ್ತಿಪಡಿಸಬೇಕು. ಇಲ್ಲದಿದ್ದರೆ ಅದಕ್ಕೆ ಎಷ್ಟುಖರ್ಚಾಗುತ್ತದೆಯೋ ಅಷ್ಟು ಹಣವನ್ನು ನೀಡಿದರೆ ನಾವೇ ದುರಸ್ತಿಪಡಿಸಿ ಗ್ರಾಮಗಳಿಗೆ ನೀರು ಪೂರೈಸುತ್ತೇವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ರಂಗನಾಥ್‌ ತಿಳಿಸಿದ್ದಾರೆ.

ಜಟಾಪಟಿ ಬಿಟ್ಟು ಕೊಳವೆ ದುರಸ್ತಿಪಡಿಸಿ ನೀರು ಪೂರೈಸಿ :  ಎರಡು ಇಲಾಖೆಗಳ ಜಟಾಪಟಯಿಂದ 16 ಗ್ರಾಮಗಳ ಜನರು ಬಿರು ಬೇಸಿಗೆ ವೇಳೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಕೊಳವೆ ಒಡೆದು ನಾಲ್ಕೈದು ದಿನ ಕಳೆದರೂ ದುರಸ್ತಿಗೆ ಯಾರೂಮುಂದಾಗುತ್ತಿಲ್ಲ. ಯುಗಾದಿ ಹಬ್ಬದ ಸಮಯದಲ್ಲೇ ನಮಗೆ ನೀರಿಲ್ಲ ದಂತಾಗಿದೆ. ಇನ್ನೆಷ್ಟು ದಿನ ಕಾಯಬೇಕು, ಯಾರು ಹೊಣೆಹೊರಬೇಕು ಎಂಬುದು ಗೊಂದಲ ಮಯವಾಗಿದೆ. ಅಸಡ್ಡೆಮನೋಭಾವ ಬಿಟ್ಟು ಇಲಾಖೆಗಳ ಅಧಿಕಾರಿಗಳು ಪರಸ್ಪರಮಾತುಕತೆ ನಡೆಸಿ, ಒಂದು ತೀರ್ಮಾನಕ್ಕೆ ಬಂದು ಕೊಳವೆದುರಸ್ತಿಪಡಿಸಿ ನಮಗೆ ನೀರು ಪೂರೈಸಬೇಕು ಎಂದು ಕೌಲಂದೆ ಹೋಬಳಿಯ ಬದನವಾಳು, ಕೌಲಂದೆ, ದೇವನೂರು ಚುಂಚನಳ್ಳಿ ಮತ್ತಿತರ ಹಳ್ಳಿಗಳ ಜನರು ಆಗ್ರಹಿಸಿದ್ದಾರೆ.

ವಿದ್ಯುತ್‌ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆಯೊಳಗೆ ಒಡೆದಿರುವ ಕೊಳವೆದುರಸ್ತಿಪಡಿಸಬೇಕು. ಇಲ್ಲದಿದ್ದರೆ ಬುಧವಾರ ನಾವೇಅದನ್ನು ದುರಸ್ತಿ ಮಾಡಿ ಗ್ರಾಮಗಳಿಗೆ ನೀರು ಪೂರೈಸಲುಕ್ರಮ ಕೈಗೊಳ್ಳುತ್ತೇವೆ. ಚರಿತಾ, ತಾಲೂಕು ಗ್ರಾಮೀಣ  ನೀರು ಸರಬರಾಜು ಅಧಿಕಾರಿ

 

 – ಶ್ರೀಧರ್‌ ಆರ್‌.ಭಟ್‌

ಟಾಪ್ ನ್ಯೂಸ್

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.