ಶಾಂತಿಯುತ- ನ್ಯಾಯಸಮ್ಮತ ಮತದಾನಕ್ಕೆ ತಯಾರಿ
ಚುನಾವಣಾ ಸುವ್ಯವಸ್ಥೆಗೆ ಪೊಲೀಸ್ ಪಥಸಂಚಲನ
Team Udayavani, Mar 31, 2019, 5:11 PM IST
ಹಳಿಯಾಳ: ಲೋಕಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಪಟ್ಟಣದಲ್ಲಿ ಹಳಿಯಾಳ ಪೊಲೀಸ್ ಇಲಾಖೆಯವರು ಸಿಪಿಐ ಬಿ.ಎಸ್. ಲೋಕಾಪುರ ಮತ್ತು ದಾಂಡೇಲಿ ಸಿಪಿಐ ಅನೀಷ್ ಮುಜಾವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹಾಗೂ ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಪೊಲೀಸ್ ಪಥ ಸಂಚಲನ ನಡೆಸಿ ಗಮನ ಸೆಳೆದರು.
ಪೊಲೀಸ್ ಠಾಣೆ ಆವರಣದಿಂದ ಬ್ಯಾಂಡ್ ಸಮೇತ್ ಪೊಲೀಸ್ ಪಥ ಸಂಚಲನವನ್ನು ಶಿವಾಜಿ ಸರ್ಕಲ್, ವನಶ್ರೀ ಸರ್ಕಲ್, ಬಸ್ ಸ್ಟ್ಯಾಂಡ್ ರಸ್ತೆ, ಮೇದಾರಗಲ್ಲಿ, ವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ವೃತ್ತ, ಬಜಾರ, ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಪಿಎಸೈ ಆನಂದಮೂರ್ತಿ ಸೇರಿದಂತೆ 50ಕ್ಕೂ ಅ ಧಿಕ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಅಲ್ಲದೇ ಪೊಲೀಸ್ ವಾಹಗಳು ಸಹ ಸಾಥ್ ನೀಡಿದವು. ಸಿಪಿಐ ಬಿ.ಎಸ್. ಲೋಕಾಪುರ ಮಾತನಾಡಿ, ಪಥ ಸಂಚಲನದ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ನಮ್ಮದಾಗಿದೆ. ಪೊಲೀಸ್ ಪರೇಡ್ನಿಂದ ಸಾಮಾನ್ಯ ಜನರಲ್ಲಿ ಉತ್ಸಾಹ ಬರುವುದರ ಜೊತೆಗೆ ನಮ್ಮೊಂದಿಗೆ ಪೊಲೀಸರು ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಮೂಲಕ ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಜನರು ಆಸಕ್ತಿ ವಹಿಸುತ್ತಾರೆ ಎಂದರು.
ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ, ತಹಶೀಲ್ದಾರ್ಗಳಾದ ಶಿವಾನಂದ ಉಳ್ಳೇಗಡ್ಡಿ, ಚಾಮರಾಜ ಪಾಟೀಲ್, ಜಿ.ಕೆ.ರತ್ನಾಕರ ಮತ್ತು ಅನಂತ ಚಿಪ್ಪಲಗಟ್ಟಿ, ಪಿಎಸ್ಐ ಆನಂದಮೂರ್ತಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್