ಸಿರಿಧಾನ್ಯಗಳ ಭರ್ಜರಿ ವ್ಯಾಪಾರ


Team Udayavani, Dec 26, 2017, 12:18 PM IST

siridhanya.jpg

ರಾಯಚೂರು: ಸಾವಯವ ಕೃಷಿ ಪದ್ಧತಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜಿಸುವ ನಿಟ್ಟಿನಲ್ಲಿ ಇಲ್ಲಿನ ಕೃಷಿ ವಿವಿಯಲ್ಲಿ ಹಮ್ಮಿಕೊಂಡಿದ್ದ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೃಷಿ ವಿವಿಯಿಂದ ಇದೇ ಸ್ಥಳದಲ್ಲಿ ನಾಲ್ಕು ದಿನಗಳ ಕೃಷಿ ಮೇಳ ನಡೆದು ಇನ್ನೂ 20 ದಿನ ಕಳೆದಿರಲಿಲ್ಲ. ಅದಾಗಲೇ ಕೃಷಿ ಇಲಾಖೆ, ಪ್ರಾಂತೀಯ ಸಾವಯವ ಕೃಷಿಕರ ಸಂಘದ ಸಹಯೋಗದಲ್ಲಿ ಮೇಳ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಾಮಾನ್ಯರು ಹಾಗೂ ಸಾವಯವ ಕೃಷಿಕರು ಅದರ ಬಳಕೆದಾರರೇ ಬೇರೆ ಎಂಬುದನ್ನು ಮೇಳ ಸಾಕ್ಷಿಕರೀಸಿತು. ಮೊದಲ ದಿನವಾದ ರವಿವಾರವೇ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆ ಒಳಗೊಂಡಂತೆ ಮೇಳ ಆಯೋಜಿಸಿದ್ದರಿಂದ ಮೂರು ಜಿಲ್ಲೆಗಳಿಂದ ರೈತರು ಆಗಮಿಸಿದ್ದರು. 

ಬಹುತೇಕ ಸಾವಯವ ರೈತರು, ಸಿರಿಧಾನ್ಯಗಳ ವ್ಯಾಪಾರಿಗಳು ಹಾಗೂ ವಿವಿಧ ಸಹಕಾರ, ಮಹಿಳಾ ಸಂಘಗಳ ಸದಸ್ಯರು ಮೇಳದಲ್ಲಿ ಕಂಡುಬಂದರು. ಸುಮಾರು 70ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಿಸಿದ್ದು, ಎಲ್ಲರಿಗೂ ಉಚಿತವಾಗಿಮಳಿಗೆ ನೀಡಲಾಗಿತ್ತು. ಇದರಿಂದ ಎಲ್ಲ ಮಳಿಗೆಗಳು ಭರ್ತಿಯಾಗಿದ್ದವು.

ಭರ್ಜರಿ ವಹಿವಾಟು: ದುಬಾರಿ ಎನಿಸಿದರೂ ಸಿರಿಧಾನ್ಯಗಳ ಖರೀದಿಗೆ ಜನ ಹಿಂದೇಟು ಹಾಕಲಿಲ್ಲ. ನಾವು ಇದು ಕೇವಲ ಪ್ರದರ್ಶನ ಮೇಳ ಎಂದುಕೊಂಡು ಕಡಿಮೆ ಧಾನ್ಯ ತಂದಿದ್ದೆವು. ಆದರೆ, ಇಲ್ಲಿ ತುಂಬಾ ಬೇಡಿಕೆಯಿದೆ. ನಾವು ತಂದಿದ್ದ ಎಲ್ಲ ಖಾದ್ಯಗಳು ಖರ್ಚಾಗಿವೆ. ಬೇಡಿಕೆ ಹೆಚ್ಚಾಗಿರುತ್ತದೆ ಎಂದು ಮೊದಲೇ ತಿಳಿದಿದ್ದರೆ ಇನ್ನೂ ಹೆಚ್ಚು ಸಿರಿಧಾನ್ಯಗಳನ್ನೇ ತರುತ್ತಿದ್ದೆವು ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು. ದರ ವ್ಯಾತ್ಯಾಸ: ಒಂಭತ್ತು ಬಗೆಯ ಸಿರಿಧಾನ್ಯಗಳೆನ್ನುತ್ತಾರೆ. ಎಲ್ಲ ವರ್ತಕರು ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಖಾದ್ಯಗಳು ಹಾಗೂ ಪ್ಯಾಕೆಟ್‌ಗಳಲ್ಲಿ ಧಾನ್ಯಗಳನ್ನು  ರಾಟಕ್ಕಿಡಲಾಗಿತ್ತು.

ಆದರೆ, ಧಾನ್ಯಗಳು ಒಂದೇ ತರಹವಿದ್ದರೂ ವಿವಿಧ ದರ ನಿಗದಿ ಮಾಡಲಾಗಿತ್ತು. ಒಂದು ಕಡೆ ಇದ್ದ ದರ ಮತ್ತೂಂದು ಕಡೆ ಇರಲಿಲ್ಲ. ಹೀಗಾಗಿ ಗ್ರಾಹಕರು ಎಲ್ಲಿ ಖರೀದಿಸಬೇಕು ಎಂಬ ಗೊಂದಲದಲ್ಲಿದ್ದಂತೆ ಕಂಡುಬಂತು. ಅಲ್ಲದೇ, ಹೀಗೆ ಯಾಕೆ ಒಂದು ಕಡೆ ಕಡಿಮೆ ಹೆಚ್ಚು ದರ ಇಟ್ಟಿದ್ದಾರೋ ಎಂದು ಜನ ಗೊಣಗುತ್ತಿದ್ದದ್ದು ಕಂಡು ಬಂತು. ವರ್ತಕರನ್ನು ಕೇಳಿದರೆ, ಎಲ್ಲ ಒಂದೇ ರೀತಿಯ ಧಾನ್ಯಗಳಿರುವುದಿಲ್ಲ. ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಮನ ರಂಜಿಸಿದ ಸಿರಿ ಸಂಜೆ
ಮೇಳದ ನಿಮಿತ್ತ ರವಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಝಿ ಸರಿಗಮಪ ಖ್ಯಾತಿ ಗಾಯಕರಾದ ಸುನೀಲ್‌, ಇಂಪನಾ, ಬಸಪ್ಪ ಹಲವು ಹಾಡುಗಳನ್ನು ಹಾಡಿ ಸರಿಸುಮಾರು ಎರಡು ಗಂಟೆಗಳ ಕಾಲ ರಂಜಿಸಿದರು. 

ಸುನೀಲ್‌ ಭಕ್ತಿಗೀತೆ, ಸಿನಿಮಾ ಹಾಡುಗಳನ್ನು ಹಾಡಿದರೆ, ಇಂಪನಾ ಯುವಕರನ್ನು ಆಕರ್ಷಿಸುವಂಥ ಟಪ್ಪಂಗುಚ್ಚಿ ಹಾಡುಗಳನ್ನೇ ಹಾಡಿದರು. ಇನ್ನು ಬಸಪ್ಪ ಹಳೆ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಕೊನೆಯಲ್ಲಿ ಇಂಪನಾ ಹಾರ್ಟ್‌ ಅನ್ನೊ ಅಡ್ಡದಲ್ಲಿ ಹಾಡಿದರೆ, ಸುನೀಲ್‌ ಅಲ್ಲಾಡ್ಸ ಅಲ್ಲಾಡ್ಸು ಹಾಡು ಹಾಡಿ ಯುವಕ ಯುವತಿಯರನ್ನು ಕುಣಿಯುವಂತೆ ಮಾಡಿದರು. ಕೊನೆಯಲ್ಲಿ ವಿವಿಯ ವಿದ್ಯಾರ್ಥಿನಿಯರು, ಯುವಕರು ಕುಣಿದು ಕುಪ್ಪಳಿಸಿದರು. ಗಾಯಕರೊಂದಿಗೆ ಸೆಲ್ಫಿ  ತೆಗೆದುಕೊಳ್ಳಲು ಯುವಕರು ಮಾತ್ರ ಸಾಲುಗಟ್ಟಿದ್ದರು.

ಮಾಹಿತಿ ನೀಡುವವರೇ ಮಾಯ..!
ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಎರಡನೇ ದಿನ ಸಂಜೆಗೆಲ್ಲ ಅಧಿಕಾರಿಗಳ್ಯಾರು ಮೇಳದಲ್ಲಿ ಕಾಣಿಸಲಿಲ್ಲ. ಮಾಹಿತಿಗಾಗಿ ನಿಗದಿ ಮಾಡಿದ್ದ ಮಳಿಗೆಗಳು ಕೂಡ ಖಾಲಿಯಾಗಿದ್ದವು. ರವಿವಾರ ಮತ್ತು ಸೋಮವಾರ ರಜೆ ಇರುವ ಕಾರಣ 2ನೇ ದಿನ ಸಂಜೆ ಕೂಡ ಹೆಚ್ಚು ಜನ ಆಗಮಿಸಿದ್ದರು. ಆದರೆ, ಮಾಹಿತಿ ನೀಡಲು ಇಲಾಖೆ ಸಿಬ್ಬಂದಿಯೇ ಇರಲಿಲ್ಲ. ಅಲ್ಲದೇ, ಮಳಿಗೆಗಳನ್ನು ಬೇಗನೇ ಖಾಲಿ ಮಾಡುವಂತೆ ತಾಕೀತು ಮಾಡಿದ್ದಲ್ಲದೇ, ಮಳಿಗೆಗಳಿಗೆ ವಿದ್ಯುತ್‌ ಕಡಿತಗೊಳಿಸಲಾಯಿತು. ಇದಕ್ಕೆ ವರ್ತಕರು ಬೇಸರ ವ್ಯಕ್ತಪಡಿಸಿದರು.

ವಿವಿಧ ಸ್ಪರ್ಧೆಗಳು
ಸಿರಿಧಾನ್ಯ ಮೇಳದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮೂರು ಜಿಲ್ಲೆಗಳಿಂದ ಸ್ಪರ್ಧಿಗಳು ಪಾಲ್ಗೊಂಡು ಗಮನ ಸೆಳೆದರು. ವಿಜೇತರಿಗೆ ಸಮಾರೋಪದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿರಿ ರಂಗೋಲಿ ಸ್ಪರ್ಧೆಯಲ್ಲಿ ರಾಯಚೂರಿನ ಪ್ರೀತಿ ನಿಜಾಂಕರಿ ಪ್ರಥಮ, ಲತಾ ದ್ವಿತೀಯ, ಹಾಗೂ ಜಯಲಕ್ಷ್ಮೀ ಅವರು ತೃತೀಯ ಸ್ಥಾನ ಪಡೆದರು. ಸಿರಿಪಾಕ ಸ್ಪರ್ಧೆಯಲ್ಲಿ ಮಿಶ್ರಧಾನ್ಯಗಳ ಹಲ್ವ ತಯಾರಿಸಿದ ರಾಯಚೂರಿನ ಪ್ರೀತಿ ಪ್ರಥಮ ಸ್ಥಾನ ಗಳಿಸಿದರೆ, ನವಣೆ ಅಕ್ಕಿ ಹಲ್ವ ತಯಾರಿಸಿದ ಸರಸ್ವತಿ ಪಾಟೀಲ್‌ ದ್ವಿತೀಯ ಸ್ಥಾನ ಹಾಗೂ ನವಣೆ ಹೋಳಿಗೆ ತಯಾರಿಸಿದ ಶಿಲ್ಪಾ ತೃತೀಯ ಸ್ಥಾನಗಳಿಸಿದ್ದಾರೆ.

ಕಿರುಧಾನ್ಯಗಳ ಖಾರದ ಅಡುಗೆ ಸ್ಪರ್ಧೆಯಲ್ಲಿ ಬಾತ್‌ ಮೊಸರನ್ನ ತಯಾರಿಸಿದ ರಾಯಚೂರಿನ ನಿರ್ಮಲಾ ಪ್ರಥಮ, ಬರಗು ವೆಜ್‌ ಬಿರಿಯಾನಿ ತಯಾರಿಸಿದ ಜಯಲಕ್ಷ್ಮೀ ದ್ವಿತೀಯ ಸ್ಥಾನ ಗಳಿಸಿದರು. ಕೊರಲೆ ಬಿಸಿ ಬೇಳೆ ಬಾತ್‌ ತಯಾರಿಸಿದ್ದ ಎಸ್‌. ಆರತಿ ತೃತೀಯ ಸ್ಥಾನ ಪಡೆದರು.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.