ಮೌಡ್ಯ ಅಳಿಸುವಾತ ನೈಜ ಗುರು: ಶಿವಾನಂದ ಶ್ರೀ
Team Udayavani, Jul 7, 2020, 11:04 AM IST
ಹುಲಸೂರ: ಮನಕುಲ ದಲ್ಲಿನ ಮೌಡ್ಯತೆ ಹೊಡೆದೊಡಿಸುವಾತನೆ ನಿಜವಾದ ಗುರು ಎಂದು ಡಾ| ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಆಶೀರ್ವಚನ ನೀಡಿದ ಸ್ವಾಮೀಜಿ ಈ ಜಗವು ಸಕಲ ಜೀವ ಸಂಕುಲಗಳಿಂದ ಕೂಡಿರುವ ಗೂಡು. ಇದರಲ್ಲಿ ಮಾನವ ಜೀವಿಯು ಒಂದು. ಎಲ್ಲ ಜೀವಿಗಳಿಗಿಂತ ಭಿನ್ನವಾಗಿ ಬದುಕನ್ನು ಕಟ್ಟಿಕೊಂಡಿವವರು ಮಾನವರೆ. ಈ ಮಾನವನಲ್ಲಿರುವ ಬುದ್ಧಿ ಶಕ್ತಿಯನ್ನು ಸೂಕ್ತ ಸನ್ನಿವೇಶಗಳಲ್ಲಿ ಸರಿಯಾದ ಕ್ರಮದಲ್ಲಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡುವವನೇ ಗುರು. ಗುರು ನಮ್ಮಲ್ಲಿರುವ ಅಂಧಕಾರ ಹೋಗಲಾಡಿಸಿ ಬೆಳಕಿನ ಜ್ಯೋತಿ ಹೊತ್ತಿ ಬೆಳಗಲು ಗುರುಗಳು ಎಣ್ಣೆ ಎಂಬ ಜ್ಞಾನ ಸುರಿದಾಗ ದೀಪ ಬೆಳಗುತ್ತದೆ ಎಂದು ಹೇಳಿದರು.
ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಶಂಕ್ರಯ್ಯ ಧಾನೂರೆ, ರಾಜಪ್ಪ ಮಂಗಾ, ಬಸವರಾಜ ಮುಕ್ತಾ ಗುರು ನಮನ ಸಲ್ಲಿಸಿದರು. ಪ್ರಮುಖರಾದ ಶಶಿಕಲಾ ಪಟನೆ, ರೇಣುಕಾ ಬೀರ್ಗೆ, ಶ್ರೀದೇವಿ ಇಜಾರೆ, ಲಕ್ಷ್ಮೀಬಾಯಿ ಧಾನೂರೆ, ಶಾರದಾ ಧಬಾಲೆ, ಶೋಭಾ ಮುಕ್ತಾ, ಪ್ರಭಾವತಿ ಧಬಾಲೆ ಇದ್ದರು.