ಯರದೊಡ್ಡಿಯಲ್ಲಿ ಅರ್ಧಕ್ಕೆ ನಿಂತ್ತ ಅಗಸಿ ಕಟ್ಟಡ ಕಾಮಗಾರಿ
Team Udayavani, Jan 10, 2022, 5:21 PM IST
ಮುದಗಲ್ಲ: ಪಟ್ಟಣ ಸಮೀಪದ ಯರದೊಡ್ಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಅಗಸಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
2018-19ನೇ ಸಾಲಿನ ಶಾಸಕರ ಅನುದಾನದಲ್ಲಿ ಸುಮಾರು 5 ಲಕ್ಷ ರೂ.ದಲ್ಲಿ ಪಿಆರ್ಇಡಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಅಗತಿ ಕಾಮಗಾರಿ ಆರಂಭವಾಗಿ 3 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಇಲಾಖೆಯ ಇಂಜನಿಯರ್ ತ್ರೀವೇಣಿ ಅವರನ್ನು ಈ ಕುರಿತು ಕೇಳಿದರೆ, ಈಗಿನ ಶಾಸಕರು ಕಾಮಗಾರಿಗೆ ಹಣ ನೀಡಿದರೇ ಪುನಃ ಅಂದಾಜು ಪತ್ರಿಕೆ ತಯಾರಿಸಿ ಅನುಮೋದನೆ ಪಡೆದು ಕಾಮಗಾರಿ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಅನುದಾನ ನೀಡುವ ಮೊದಲು ಯಾವ ಕಾಮಗಾರಿಗೆ ಎಷ್ಟು ಹಣ ಬೇಕು. ಎಷ್ಟು ಅನುದಾನ ಇದ್ದರೆ ಕಾಮಗಾರಿ ಮುಗಿಯುತ್ತದೆ ಎಂಬ ಬಗ್ಗೆ ಅಧಿಕಾರಿಗಳಿಗೆ ಜ್ಞಾನವಿಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಆರಂಭಿಸಿ ಈಗ ಅರೆಬರೆ ಕೆಲಸ ಬಿಟ್ಟು ಹೋಗಿರುವುದು ಎಷ್ಟರ ಮಟ್ಟಿಗೆ ಸಮಂಜಸ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಈ ಭಾಗದ ಚುನಾಯಿತ ಪ್ರತಿನಿಧಿಗಳು ಗಮನಹರಿಸಿ ಅಗಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಯರದೊಡ್ಡಿ ಗ್ರಾಮದ ಬಸವರಾಜ, ಬಸನಗೌಡ, ನಾಗಪ್ಪ, ದುರುಗಪ್ಪ, ದ್ಯಾವನಗೌಡ, ತಿಮ್ಮಣ್ಣ, ಪ್ರವೀಣ ಆಗ್ರಹಿಸಿದ್ದಾರೆ.