ಕೃಷಿ ಕಾಯ್ದೆ ವಾಪಸ್ಗೆ ಹೆದ್ದಾರಿ ತಡೆ
Team Udayavani, Feb 7, 2021, 2:55 PM IST
ಲಿಂಗಸುಗೂರು: ರೈತ, ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿ ಸಿ ಸಂಯುಕ್ತ ಹೋರಾಟ ಕರ್ನಾಟಕ ಜಂಟಿ ವೇದಿಕೆ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಶನಿವಾರ ರಸ್ತೆತಡೆ ನಡೆಸಲಾಯಿತು.
ಬಿಜೆಪಿ ಸರ್ಕಾರ ಸಂಸತ್ತಿನಲ್ಲಿ 2020ರಲ್ಲಿ ಅಂಗೀಕರಿಸಿರುವ ತ್ರಿವಳಿ ಕೃಷಿ ಶಾಸನಗಳು, ಉದ್ದೇಶಿತ ವಿದ್ಯುತ್ ತಿದ್ದಪಡಿ ಮಸೂದೆ ರದ್ದಾಗಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ, ಅಂಗೀಕರಿಸಿರುವ 4 ಕಾರ್ಮಿಕ ಸಂಹಿತೆಗಳು ರದ್ದಾಗಬೇಕು. ಜೀವನಾಶ್ಯಕ ವಸ್ತುಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಕಡಿಮೆಗೊಳಿಸಬೇಕು.
ಇದನ್ನೂ ಓದಿ:ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ರೆಜಿಮೆಂಟ್: ಪಾದಯಾತ್ರೆ
ವಿದ್ಯುತ್, ಬ್ಯಾಂಕ್, ವಿಮೆ, ಆರ್ಥಿಕ ವಲಯ ಹಾಗೂ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ವಿರೋಧಿ ಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ರಸ್ತೆತಡೆ ನಡೆಸಲಾಯಿತು. ಈ ವೇಳೆ ರಮೇಶ ವೀರಾಪುರ, ಶಿವಪುತ್ರಗೌಡ ನಂದಿಹಾಳ, ಬಾಬಾ ಜಾನಿ, ಶರಣಪ್ಪ ಗೋನವಾರ, ಸದ್ದಾಂಹುಸೇನ್, ಖಾಲಿದ್ ಚಾವೂಸ್ ಸೇರಿದಂತೆ ಅನೇಕರಿದ್ದರು.