ಹೆಚ್ಚುವರಿ ವಿದ್ಯುತ್ ಕಂಬ ಅಳವಡಿಸಿ
Team Udayavani, Feb 18, 2022, 6:00 PM IST
ಸಿರವಾರ: ಪಟ್ಟಣದ 6ನೇ ವಾರ್ಡ್ ವಿಜಯನಗರ ಕಾಲೋನಿಯಲ್ಲಿ ಹೆಚ್ಚುವರಿ ವಿದ್ಯುತ್ ಕಂಬ ಹಾಕಿ ವಿದ್ಯುತ್ ಬಲ್ಪ್ ಬದಲಾಯಿಸುವಂತೆ ವಾರ್ಡಿನ ಸದಸ್ಯ ಹಾಜಿಚೌದ್ರಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ವಿಜಯನಗರ ಕಾಲೋನಿಯಲ್ಲಿ ಈ ಹಿಂದೆ ಹಾಕಿದ ವಿದ್ಯುತ್ ಕಂಬಗಳು ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಬಹಳ ಅಂತರವಿದ್ದು, ಗಾಳಿ-ಮಳೆಗೆ ವೈರ್ಗಳು ಕೆಳಗಡೆ ತೂಗಾಡಿ ಕಂಬಗಳು ಭೂಮಿಗೆ ಬೀಳುವಂತಾಗಿವೆ. ಈ ಹಿಂದೆ ನಾಲ್ಕೈದು ಬಾರಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ವಿದ್ಯುತ್ ವೈರ್ ಹರಿದು ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಏನು ಆಗಿರುವುದಿಲ್ಲ. ಇದರಿಂದ ಕಾಲೋನಿಯ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಏನಾದರೂ ಅನಾಹುತ ಸಂಭವಿಸಬಹುದು. ಜೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಹೊಸ ವಿದ್ಯುತ್ ವೈರ್ ಅಳವಡಿಸಿ ಹೆಚ್ಚುವರಿ ಕಂಬಗಳನ್ನು ಅಳವಡಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಮಹ್ಮದ್ ಹುಸೇನ್, ಮಲ್ಲಯ್ಯ ಲಾರಿ, ಮಹಿಬೂಬ ಮಾಸ್ಟರ್, ಚಂದ್ರು ಹಡಪದ, ರಫಿ, ದಸ್ತಗಿರಿ, ಮಲ್ಲಯ್ಯ, ಬಂದೇನವಾಜ್, ಅಜೀಜ್, ರಂಗನಾಥ, ಮಹಿಬೂಬ ಕಂಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…