ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕ ಮಾತನಾಡಲಿ: ಪ್ರಹ್ಲಾದ ಜೋಶಿ
Team Udayavani, Apr 22, 2022, 5:22 PM IST
ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಧಮ್ ಗಿಮ್ ಎಂದು ಮಾತನಾಡುವುದು ಅವರ ಘನತೆಗೆ ತಕ್ಕನಾದುದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹಾಗೆ ನಮಗೂ ಮಾತನಾಡಲು ಬರುತ್ತದೆ. ಆದರೆ ನಾವು ಯಾರಿಗೂ ಅಗೌವರದಿಂದ ಮಾತನಾಡುವುದಿಲ್ಲ. ಧಮ್ ದಮ್ಮು ಎಂಬ ಶಬ್ದಗಳನ್ನು ಸಣ್ಣ ಹುಡುಗರ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದರು.
ಇದನ್ನೂ ಓದಿ:ಒಬ್ಬ ತಪ್ಪು ಮಾಡಿದರೆ, ಎಲ್ಲಾ ಮೌಲ್ವಿಗಳು ತಪ್ಪು ಮಾಡುತ್ತಾರೆಯೇ: ಸಿದ್ದರಾಮಯ್ಯ
ಆರ್ ಎಸ್ ಎಸ್ ಮತ್ತು ಎಸ್ ಡಿಪಿಐ ಹೋಲಿಕೆ ಮಾಡುವುದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನದ ಹೇಳಿಕೆಗೆ ಸಾಕ್ಷಿಯಾಗಿದೆ. ನೆಹರು ಕಾಲದಲ್ಲಿ ವಲ್ಲಭ ಬಾಯಿ ಪಟೇಲ್ ಗೃಹಮಂತ್ರಿಯಾಗಿದ್ದಾಗ ಗಣರಾಜ್ಯೋತ್ಸವದ ಪಥ ಸಂಚನಲ್ಲೂ ಆರ್ ಎಸ್ ಎಸ್ ಗೆ ಅವಕಾಶ ನೀಡಲಾಗಿತ್ತು ಎನ್ನುವುದನ್ನು ಅವರು ಮರೆಯಬಾರದು ಎಂದರು.