ಚಿತ್ತಾಪುರ ಗ್ರಾಮಕ್ಕೆ ಹಾಸ್ಟೆಲ್ವುಂಜೂರಾತಿಗೆ ಆಗ್ರಹ
ಚಿತ್ತಾಪುರ ಗ್ರಾಮಕ್ಕೆ ಹಾಸ್ಟೆಲ್ ಮಂಜೂರಿಗೆ ಆಗ್ರಹಿಸಿ ಗ್ರಾಮಸ್ಥರು ಶಾಸಕ ಡಿ.ಎಸ್. ಹೂಲಗೇರಿ ಅವರಿಗೆ ಮನವಿ ಸಲ್ಲಿಸಿದರು.
Team Udayavani, Feb 14, 2021, 4:18 PM IST
ಲಿಂಗಸುಗೂರು: ತಾಲೂಕಿನ ಚಿತ್ತಾಪುರ ಗ್ರಾಮಕ್ಕೆ ವಸತಿ ನಿಲಯ ಮಂಜೂರು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಶಾಸಕ ಡಿ.ಎಸ್. ಹೂಲಗೇರಿ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಿದ್ದು, ಈ ಪ್ರೌಢಶಾಲೆಗೆ ಸುತ್ತಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಗಮಿಸುತ್ತಿದ್ದಾರೆ. ಇವರ ಅನುಕೂಲಕ್ಕಾಗಿ ಸರ್ಕಾರಿ ಹಾಸ್ಟೆಲ್ ಮಂಜೂರು ಮಾಡಬೇಕು. ವಸತಿ ನಿರ್ಮಾಣ ಮಾಡಲು ಗ್ರಾಪಂ ಹಿಂಭಾಗದಲ್ಲಿ ವಿಶಾಲವಾದ ಖಾಲಿ ನಿವೇಶನಗಳು ಇವೆ. ಗ್ರಾಮದ ಬಹುದಿನದ ಬೇಡಿಕೆಯಾದ ವಸತಿ ನಿಲಯವನ್ನು ಮಂಜೂರು ಮಾಡುವಂತೆ ಆಗ್ರಹಿಸಿದರು. ಮುಖಂಡರಾದ ಚನ್ನಾರೆಡ್ಡಿ ಬಿರಾದಾರ, ಯಂಕಪ್ಪ ಚಿತ್ತಾಪುರ, ಸೋಮಣ್ಣ ಬಾಚಾಳ, ಗೂರಪ್ಪ ಮುತ್ತಪ್ಪ, ಜಾಫರ್, ನಾಗಪ್ಪ ಕುರಿ ಇದ್ದರು.